News Karnataka Kannada
Friday, May 03 2024
ಮಂಗಳೂರು

ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಯುವ ಜನತಾದಳದ ನೂತನ ಕಚೇರಿ ಉದ್ಘಾಟನೆ

Yuva Janata Dal's new office inaugurated at Kottara Chowki
Photo Credit : R Bhat

ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಯುವ ಜನತಾದಳದ ನೂತನ ಕಚೇರಿಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉದ್ಘಾಟನೆಗೊಳಿಸಿ ಮಾತನಾಡಿ ಇನ್ನಷ್ಟು ಯುವಕರು ಪಕ್ಷಕ್ಕೆ ಸೇರ್ಪಡೆ ಆಗಬೇಕೆಂದು ಮನವಿ ಮಾಡಿದರು.

ಕರಾವಳಿ ಭಾಗದ ಯುವಕರಿಗೆ ನನ್ನ ಸಂಪೂರ್ಣ ಬೆಂಬಲ ಸಹಕಾರ ಇದೆಯೆಂದು ಈ ಸಂಧರ್ಭದಲ್ಲಿ ಕುಮಾರಸ್ವಾಮಿಯವರು ತಿಳಿಸಿದರು. ಹಾಗೂ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ, ವಿಧಾನಪರಿಷತ್ ಶಾಸಕರಾದ ಬಿ ಎಂ ಫಾರೂಕ್, ಬೋಜೇಗೌಡರು, ಜಿಲ್ಲಾಧ್ಯಕ್ಷರಾದ ಜಾಕೆ ಮಾದೇ ಗೌಡ,ಯುವಕರಿಗೆ ಸಾತ್ ನೀಡಿದರು.

ಯುವ ಜನತಾದಳದ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ರವರು ಎಲ್ಲಾ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಯುವ ಮುಖಂಡರಾದ ಫೈಝಲ್ ರೆಹಮಾನ್, ಆಸೀಫ್,ಎಮ್ ಎ ಎಸ್ ಆಸಿಫ್ ,ರತೀಶ್ ಕರ್ಕೇರ,ಹಿತೇಶ್ ರೈ, ರಾಶ್ ಬ್ಯಾರಿ, ಶವಾಜ್, ಬಿಲಾಲ್,ನಿತೇಶ್ ಪೂಜಾರಿ,ವಿನೀತ್, ಮೋಹನ್ ,ರಿನೀತ್, ನಿಶಾಂತ್,, ತಮೀಮ್, ಶ್ರೀನಾಥ್, ಯಶ್ವಿಲ್, ಸುಮಿತ್ ಸುವರ್ಣ, ರಹೀಮ್ ಮಲ್ಲೂರು, ಕನಕದಾಸ್, ವಿಲ್ಸನ್, ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು