ಮಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರನ್ ಅವರು ಮಾಧ್ಯಮದೊಂದಿಗೆ ಮಾತನಾಡಿ ಏನು ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ನಡೆದ ಗಲಭೆ ಮತ್ತು ಕೊಲೆಗೆ ಸಂಬಂಧಿಸಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಚುನಾವಣೆ ಸಮೀಪಿಸಿದಾಗ ಬಾಂಬ್ ಸ್ಫೋಟವಾಗುವಂಥದ್ದು ಕೊಲೆ ನಡೆಯುವಂಥದು ನಿರ್ದಶನ. ಶಿವಮೊಗ್ಗದಲ್ಲಿ ಹರ್ಷನ ಕೊಲೆ ನಡೆದಾಗ ಎಚ್ಚೆತ್ತುಕೊಳ್ಳಬೇಕಾಗಿತ್ತು, ಎಚ್ಚೆತ್ತುಕೊಂಡಿದ್ದರೆ ಪ್ರವೀಣ್ ಹತ್ಯೆ ಆಗ್ತಿರ್ಲಿಲ್ಲ. ಚುನಾವಣಾ ಪೂರ್ವದಲ್ಲಿ ಬಿಜೆಪಿಗರು ಹೇಳಿಕೆ ನೀಡಿದರು, ಅಧಿಕಾರಕ್ಕೆ ಬಂದ್ರೆ ಪಿಎಫ್ಐ ಎಸ್ಡಿಪಿಐ ಬ್ಯಾನ್ ಮಾಡ್ತಿನಿ ಅಂತೇಳಿದ್ದ್ರಿ. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಅವರ ಅಧಿಕಾರ ಇದೆ ಇವತ್ತಿಗೂ ಬ್ಯಾನ್ ಆಗಿಲ್ಲ ಎಂದರು.
ಎಸ್ ಡಿಪಿಐ ಪಿಎಫ್ಐ ಬ್ಯಾನ್ ಮಾಡಿದ್ರೆ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ಇಂದಿಗೂ ಅವರನ್ನು ಪೋಷಿಸುತ್ತಿದ್ದಾರೆ ಅದರ ಪರಿಣಾಮವೇ ಇಂದು ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ . ಬಿಜೆಪಿಯಲ್ಲಿಯೇ ಅಲ್ಪಸಂಖ್ಯಾತ ಮೋರ್ಚಾ ಇದ್ದು ಅವರ ಕಾರ್ಯಕರ್ತರೇ ಆಗಿರಬಾರದು ಎಂದು ಪ್ರಶ್ನಿಸಿದರು ಅಲ್ಲದೆ ಈ ಎಲ್ಲ ಘಟನೆಗೆ ಬಿಜೆಪಿ ಸರ್ಕಾರದ ವೈಫಲ್ಯ ಎಂದು ಹೇಳಿದರು.