ಬೆಳ್ತಂಗಡಿ: ಉಜಿರೆಯಿಂದ ಚಾರ್ಮಾಡಿ ಕಡೆ ಸಂಚರಿಸುವ ವೇಗದೂತ ಕೆಂಪು ಬಸ್ಸುಗಳಲ್ಲಿ ಮುಂಡಾಜೆಯ ವಿದ್ಯಾರ್ಥಿಗಳಿಗೆ ನಿಲುಗಡೆ ನೀಡ ಬೇಕೆಂದು ಆಗ್ರಹಿಸಿ ವೇಗದೂತ ಕೆಂಪು ಬಸ್ಸುಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ತಡೆ ಹಿಡಿದ ಘಟನೆ ಸೋಮವಾರ ನಡೆಯಿತು.
ಕೋವಿಡ್ ಬಳಿಕ ಈ ರೂಟ್ ನಲ್ಲಿ ಬಸ್ ಟ್ರಿಪ್ ಕಡಿತಗೊಂಡಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಕಾರಣದಿಂದ ಮೂಡಿಗೆರೆ, ಚಿಕ್ಕಮಗಳೂರು ಕಡೆ ಪ್ರಯಾಣಿಸುವ ಕೆಂಪು ಬಸ್ಸುಗಳನ್ನು ಸಂಜೆ ಸಮಯ ಸೋಮಂತಡ್ಕದಲ್ಲೀ ನಿಲುಗಡೆ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಲಾಯಿತು. ಆದರೆ ಕೆಎಸ್ಸಾರ್ಟಿಸಿ ಚಾಲಕ, ನಿರ್ವಾಹಕರು ಇದಕ್ಕೆ ಒಪ್ಪದ ಕಾರಣ ಬಸ್ ಗಳನ್ನು ತಡೆ ಹಿಡಿಯಲಾಯಿತು. ಬಸ್ಸುಗಳನ್ನು ಮಾತ್ರ ತಡೆಹಿಡಿದು, ಇತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಳೆದ ಹಲವು ವರ್ಷಗಳ ಹಿಂದೆ ಪಾಸ್ ಇರುವ ವಿದ್ಯಾರ್ಥಿಗಳಿಗೆ ಅಗತ್ಯ ಸ್ಥಳಗಳಲ್ಲಿ ನಿಲುಗಡೆ ನೀಡುವ ಬಗ್ಗೆ ಆದೇಶ ಪ್ರಕಟಗೊಂಡಿದೆ. ಆದರೆ ಇದು ಗೊಂದಲಮಯವಾಗಿ ಮುಂದುವರಿದಿದೆ.
ಅಗತ್ಯ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ನಿಲುಗಡೆ ಕೊಡುವ ಕುರಿತು ಚಾಲಕ,ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಇನ್ನೊಮ್ಮೆ ಸೂಚನೆ ನೀಡಲಾಗು ವುದೆಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.