News Karnataka Kannada
Saturday, May 04 2024
ಮಂಗಳೂರು

ಉಜಿರೆ: ಕೆಂಪು ಬಸ್ ಗಳನ್ನು ತಡೆ ಹಿಡಿದ ವಿದ್ಯಾರ್ಥಿಗಳು

Ujire
Photo Credit : By Author

ಬೆಳ್ತಂಗಡಿ: ಉಜಿರೆಯಿಂದ ಚಾರ್ಮಾಡಿ ಕಡೆ ಸಂಚರಿಸುವ ವೇಗದೂತ ಕೆಂಪು ಬಸ್ಸುಗಳಲ್ಲಿ ಮುಂಡಾಜೆಯ ವಿದ್ಯಾರ್ಥಿಗಳಿಗೆ ನಿಲುಗಡೆ ನೀಡ ಬೇಕೆಂದು ಆಗ್ರಹಿಸಿ ವೇಗದೂತ ಕೆಂಪು ಬಸ್ಸುಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ತಡೆ ಹಿಡಿದ ಘಟನೆ ಸೋಮವಾರ ನಡೆಯಿತು.

ಕೋವಿಡ್ ಬಳಿಕ ಈ ರೂಟ್ ನಲ್ಲಿ ಬಸ್ ಟ್ರಿಪ್ ಕಡಿತಗೊಂಡಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಕಾರಣದಿಂದ ಮೂಡಿಗೆರೆ, ಚಿಕ್ಕಮಗಳೂರು ಕಡೆ ಪ್ರಯಾಣಿಸುವ ಕೆಂಪು ಬಸ್ಸುಗಳನ್ನು ಸಂಜೆ ಸಮಯ ಸೋಮಂತಡ್ಕದಲ್ಲೀ ನಿಲುಗಡೆ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಲಾಯಿತು. ಆದರೆ ಕೆಎಸ್ಸಾರ್ಟಿಸಿ ಚಾಲಕ, ನಿರ್ವಾಹಕರು ಇದಕ್ಕೆ ಒಪ್ಪದ ಕಾರಣ ಬಸ್ ಗಳನ್ನು ತಡೆ ಹಿಡಿಯಲಾಯಿತು. ಬಸ್ಸುಗಳನ್ನು ಮಾತ್ರ ತಡೆಹಿಡಿದು, ಇತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಕಳೆದ ಹಲವು ವರ್ಷಗಳ ಹಿಂದೆ ಪಾಸ್ ಇರುವ ವಿದ್ಯಾರ್ಥಿಗಳಿಗೆ ಅಗತ್ಯ ಸ್ಥಳಗಳಲ್ಲಿ ನಿಲುಗಡೆ ನೀಡುವ ಬಗ್ಗೆ ಆದೇಶ ಪ್ರಕಟಗೊಂಡಿದೆ. ಆದರೆ ಇದು ಗೊಂದಲಮಯವಾಗಿ ಮುಂದುವರಿದಿದೆ.

ಅಗತ್ಯ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ನಿಲುಗಡೆ ಕೊಡುವ ಕುರಿತು ಚಾಲಕ,ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಇನ್ನೊಮ್ಮೆ ಸೂಚನೆ ನೀಡಲಾಗು ವುದೆಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು