ಬೆಳ್ತಂಗಡಿ: ಕಾಮ, ಕ್ರೋಧ, ಮೋಹ, ಲೋಭ,ಮದ ಮತ್ಸರ ಆರು ಶತ್ರುಗಳು ನಮ್ಮೊಳಗೆ ಕುಳಿತು ನಮ್ಮನ್ನು ನಾಶಮಾಡುತ್ತದೆ. ದೇವರನ್ನು ನಾವು ನಮ್ಮಿಂದ ಹೊರಗಿರಿಸಿದಲ್ಲಿ ಈ ಆರು ಶತ್ರುಗಳು ನಮ್ಮನ್ನು ಕಾಡುತ್ತದೆ. ಅದಕ್ಕಾಗಿ ನಮ್ಮ ಒಳಿತಿಗಾಗಿ ದೇವರ ಆರಾಧಿಸೋಣ ಎಂದು ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು ನುಡಿದರು.
ಓಡಿಲ್ನಾಳ ಗ್ರಾಮದ ಶ್ರೀರಾಮನಗರ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಡಿ.೩೧ ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇವರ ಆರಾಧನೆಯಿಂದ ಗ್ರಾಮಕ್ಕೆ ಆವರಿಸುವ ದುಃಖ ದುಮ್ಮಾನ, ಅನರ್ಥಾದಿಗಳನ್ನು ದೂರ ಮಾಡಿ ಸುಖ ಶಾಂತಿ ನೆಲೆಸುವಂತೆ ಮಾಡುತ್ತಾರೆ. ಅದಕ್ಕಾಗಿ ದೇವರು ನಮ್ಮ ಬದುಕಿನಲ್ಲಿ ಬೇಕೆ ಬೇಕು. ಊರಿಂದ ದೂರ ಹೋಗಿದ್ದ ದೇವರನ್ನು ಮತ್ತೆ ಕರೆತಂದು ಪುನರ್ಪ್ರತಿಷ್ಠೆ ಮಾಡಿ ದೇವರ ಅನುಗ್ರಹ ಪಡೆಯಲು ಧಾರ್ಮಿಕ ಕಾರ್ಯಕ್ರಮ ಮಾಡಿದ್ದಾರೆ. ನಿಮ್ಮ ಈ ಪ್ರಯತ್ನಕ್ಕೆ ಕಿರಾತಮೂರ್ತಿ ಸರ್ವವಿಧದ ಶ್ರೇಯಸ್ಸು ಕರುಣಿಸಲಿ ಎಂದು ಹಾರೈಸಿದರು.
ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದ ಅ‘ಕ್ಷ ಎಂ.ಪದ್ಮಗೌಡ ಅಧ್ಯಕ್ಷತೆ ವಹಿಸಿದ್ದರು. ಕಿಯೋನಿಕ್ಸ್ ಬೆಂಗಳೂರು ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಅರಿಕೋಡಿ ಧರ್ಮದರ್ಶಿಗಳು ಹರೀಶ್, ಕಾಮಿಡಿ ಕಿಲಾಡಿ ಖ್ಯಾತಿಯ ನಟ ಅನಿಶ್ ಅಮೀನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಆಗಮಿಸಿದ್ದರು.
ಭಾರತೀಯ ಮಜ್ದೂರು ಸಂಘ ಮತ್ತು ವಕೀಲರಾದ ಅನಿಲ್ ಕುಮಾರ್ ಯು., ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಾಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಘಟಕದ ಸಹ ಕಾರ್ಯದರ್ಶಿ ನವೀನ್ ನೆರಿಯ, ಜೋತಿಷ್ಯರು ಪ್ರಭಾಕರ ಭಟ್ ಇಡ್ಯ, ಕುವೆಟ್ಟು ಗ್ರಾ.ಪಂ. ಸದಸ್ಯೆ ವನಿತಾ ಜೆ.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾ‘ಕ್ಷ ರಾಜ್ ಪ್ರಕಾಶ್ ಪಡ್ಡೆಜಾಲು, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ.ಜೈನ್, ಉಪಾಧ್ಯಕ್ಷ ಜಯಕರ ಶೆಟ್ಟಿ ಸ್ವಾಗತಿಸಿ, ಶಿವಾನಂದ ಪಿ.ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಸಂದೇಶ್ ಅನಿಲ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುವೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನಾಟ್ಯ ವೈಭವ ಜಾದೂಗಾರ ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ ಜರುಗಿತು.
ಫೋಟೋ: ಉಡುಪಿ ಶ್ರೀ ಪೇಜಾವರ ಅ‘ಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಆಶೀರ್ವಾದ ನೀಡಿದರು.