ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಜನವರಿ 7 ರಂದು ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಕೊಡಗು ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಲ್ಸ್ ವಿದ್ಯಾಸಂಸ್ಥೆ ಸಹಯೋಗದಲ್ಲಿ 6 ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬೆಳ್ಳಿಹಬ್ಬ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಹಾಗೂ ಸಾಂಸ್ಕೃತಿಕ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು (1 ರಿಂದ 4ನೇ ತರಗತಿ) ತಮ್ಮ ಇಷ್ಟದ ಚಿತ್ರ ಬಿಡಿಸಬಹುದು.
ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ (5 ರಿಂದ 7) ಸ್ಪರ್ಧೆಗೆ ಪ್ರಕೃತಿ ಎಂಬ ವಿಷಯ ನೀಡಲಾಗಿದೆ. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ A4 ಸೈಜ್ ನ ಡ್ರಾಯಿಂಗ್ ಶೀಟ್ ನೀಡಲಾಗು ತ್ತದೆ. ಉಳಿದ ವಿಭಾಗದವರಿಗೆ A3 ಸೈಜ್ ನ ಡ್ರಾಯಿಂಗ್ ಶೀಟ್ ನೀಡಲಾಗುತ್ತದೆ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ (8 ರಿಂದ 10) ವನ್ಯಜೀವಿ ಎಂಬ ವಿಷಯ ನೀಡಲಾಗಿದೆ. ಪಿಯುಸಿ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು ಕಾವೇರಿ ನದಿಯ ಐತಿಹ್ಯ ವಿಷಯದ ಮೇಲೆ ಚಿತ್ರ ಬಿಡಿಸಬೇಕಾಗುತ್ತದೆ.
ಸಾರ್ವಜನಿಕರಿಗೂ ಚಿತ್ರಕಲಾ ಸ್ಪರ್ಧೆ ಇದ್ದು, ಕೊಡಗಿನ ಐತಿಹಾಸಿಕ ಸ್ಥಳಗಳು ವಿಷಯ ದ ಮೇಲೆ ಚಿತ್ರ ಬಿಡಸಬೇಕಾಗು ತ್ತದೆ.
ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ ಪ್ರತ್ಯೇಕ ಸ್ಪರ್ಧೆ ಇದ್ದು, ಪತ್ರಕರ್ತ ಎಂಬ ವಿಷಯ ಮೇಲೆ ಚಿತ್ರ ಬಿಡಿಸಬೇಕಾಗುತ್ತದೆ. ಪ್ರಾಥಮಿಕ ವಿಭಾಗದ ಮಕ್ಕಳು ಚಿತ್ರಕಲೆಗೆ ಕ್ರೆಯಾನ್ಸ್, ಪೇಸ್ಟಲ್ಸ್, ಜಲ ವರ್ಣ ಮಾಧ್ಯಮ ಬಳಸಬಹುದಾಗಿದೆ. ಉಳಿದ ವಿಭಾಗದ ಸ್ಪರ್ಧಿಗಳು ವಾಟರ್ ಕಲರ್, ಅಕ್ರಿಲಿಕ್, ಪೋಸ್ಟರ್ ಮಾಧ್ಯಮಗಳನ್ಬು ಬಳಸಬಹುದಾಗಿದೆ.
ಪ್ರತಿ ವಿಭಾಗದಲ್ಲಿ 3 ಸಾವಿರ ರೂ ಪ್ರಥಮ, 2 ಸಾವಿರ ರೂ ದ್ವಿತೀಯ, 1 ಸಾವಿರ ರೂ ತೃತೀಯ ಬಹುಮಾನ ಮತ್ತು ಹಲವು ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
ಸ್ಪರ್ಧೆ ನಿಯಮಗಳು
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಪಾಲ್ಗೊಳಬಹುದು. ಶಾಲಾ- ಕಾಲೇಜಿಗಳಿಂದ ಪಾಲ್ಗೊಳ್ಳುವ ಸ್ಪರ್ಧಿಗಳ ಸಂಖ್ಯೆಗೆ ನಿರ್ಬಂಧ ಇರುವು ದಿಲ್ಲ. ವಿದ್ಯಾರ್ಥಿಗಳು ನೇರವಾಗಿ ಹೆಸರು ನೋಂದಾಯಿಸಿಕೊಳ್ಳ ಬಹುದು.
*ಒಬ್ಬ ಸ್ಪರ್ಧಿ ಒಂದು ವಿಭಾಗ ದಲ್ಲಿ ಮಾತ್ರ ಸ್ಪರ್ಧಿಸಬಹುದು.
*ಸ್ಪರ್ಧೆಗೆ 1.30 ಗಂಟೆ ಸಮಯಾವಕಾಶ ನೀಡಲಾಗು ತ್ತದೆ.
*ಹೆಸರು ನೋಂದಾವಣೆಗೆ ಜನವರಿ 5 ಕೊನೆಯ ದಿನ. ನಂತರ ಬರುವ ಹೆಸರುಗಳನ್ನು ಪರಿಗಣಿಸಲಾಗುವುದಿಲ್ಲ.
*ಸ್ಥಳದಲ್ಲೇ ಹೆಸರು ನೋಂದಾವಣೆಗೆ ಅವಕಾಶವಿಲ್ಲ.
ಜ.7 ರಂದು ಗೋಣಿಕೊಪ್ಪ ಕಾಲ್ಸ್ ಶಾಲೆಯಲ್ಲಿ ಬೆಳಗ್ಗೆ 9 ಗಂಟೆಗೆ ಗಂಟೆಗೆ ಸ್ಪರ್ಧೆ ಆರಂಭವಾಗುತ್ತದೆ
*ಸ್ಪರ್ಧಿಗಳು 9 ಗಂಟೆ ಒಳಗೆ ಸ್ಥಳದಲ್ಲಿ ಹಾಜರಿರಬೇಕು.
*ಸ್ಪರ್ಧಿಗಳಿಗೆ ಡ್ರಾಯಿಂಗ್ ಶೀಟ್ ಮಾತ್ರ ಸ್ಥಳದಲ್ಲಿ ನೀಡಲಾಗುತ್ತದೆ.
*ಉಳಿದ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು.
*ಚಿತ್ರಕಲೆಯಲ್ಲಿ ಸ್ಕೆಚ್ ಪೆನ್, ಬಾಲ್ ಪೆನ್, ಕಲರ್ ಪೆನ್ಸಿಲ್, ಮಾರ್ಕರ್ ಬಳಸಲು ಅವಕಾಶ ವಿಲ್ಲ.
*ಅದೇ ದಿನ ಮಧ್ಯಾಹ್ನ ಸ್ಪರ್ಧೆ ಯ ತೀರ್ಪುಗಾರಿಕೆ ಮತ್ತು ಬಹುಮಾನ ವಿತರಣೆಯಾಗು ತ್ತದೆ.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಣ್ಣುವಂಡ ಕಿಶೋರ್ ನಾಚಪ್ಪ (+919945635502) ಅವರಿಗೆ ವಾಟ್ಸಾಪ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳ ಬಹುದು. ಸ್ಪರ್ಧಿಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿಗಳಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗು ತ್ತದೆ.