ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಪ್ತಾಹದ ಅಂಗವಾಗಿ ಎನ್ ಸಿಸಿ ಆರ್ಮಿ ಮತ್ತು ಕಾಲೇಜಿನ ನೌಕಾ ಘಟಕಗಳು ಮತ್ತು 18 ಕರ್ನಾಟಕ ಬೆಟಾಲಿಯನ್ (ಎನ್ ಸಿಸಿ) ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ರಕ್ತದಾನ ಶಿಬಿರ ನಡೆಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯಾ ರೈ, 18 ಕರ್ನಾಟಕ ಬೆಟಾಲಿಯನ್ (ಎನ್ಸಿಸಿ)ಯ ಕರ್ನಲ್ ಎನ್.ಆರ್.ಭಿಡೆ, ಕಾಲೇಜಿನ ಎನ್ಸಿಸಿ ಸೇನಾಧಿಕಾರಿ ಮೇಜರ್ ಡಾ.ಜಯರಾಜ್ ಎನ್., ನೌಕಾ ಘಟಕದ ಅಧಿಕಾರಿ ಲೆಫ್ಟಿನೆಂಟ್ ಡಾ.ಯತೀಶ್ ಕುಮಾರ್ ಮತ್ತು ಎನ್ಸಿಸಿ ಕೆಡೆಟ್ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸಹಕರಿಸಿದರು.