ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ ರಚನೆಯಾಗಿದ್ದು ಇದರ ನೂತನ ಅಧ್ಯಕ್ಷರಾಗಿ ಬ್ಯಾಂಕ್ ನಿವೃತ್ತ ಉದ್ಯೋಗಿ ತ್ರಿವಿಕ್ರಮ ಕೇಳ್ಕರ್ ಬೆಳ್ತಂಗಡಿ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈಚೆಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಮುಂಡಾಜೆ ಸಿ.ಎ.ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡಕೆ, ಖಜಾಂಜಿಯಾಗಿ ಮುಂಡಾಜೆ ಚಿತ್ಪಾವನ ಸಂಘಟನೆಯ ಅಧ್ಯಕ್ಷ ವಾಸುದೇವ ಗೋಖಲೆ ಮುಂಡಾಜೆ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಪರೋಹಿತ ವರದಶಂಕರ ದಾಮಲೆ ನೇತ್ರಾಳ, ದಂತವೈದ್ಯ ಡಾ.ಶಶಿಧರ ಡೋಂಗ್ರೆ, ಸೇಣೆರೆ ಬೈಲು ಸೂಳಬೆಟ್ಟು, ಜೊತೆಕಾರ್ಯದರ್ಶಿಯಾಗಿ ಉದ್ಯಮಿ ರಶ್ಮೀ ಪಟವರ್ಧನ್ ಬೆಳ್ತಂಗಡಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಗೆ ನಿವೃತ್ತ ಅಧ್ಯಾಪಕ ಗೋವಿಂದ ದಾಮ್ಲೆ ಉಜಿರೆ, ಉಷಾ ಎಸ್.ಮೆಹೆಂದಳೆ ಕಾಪಿನಡ್ಕ, ನರಸಿಂಹ ಪಾಳಂದೆ ದರ್ಭೆತಡ್ಕ, ರವಿಕಲಾ ತಾಮ್ಹನ್ಕಾರ್ ದರ್ಭೆತಡ್ಕ, ಪ್ರಹ್ಲಾದ ಫಡಕೆ ಮುಂಡಾಜೆ, ವೇಣುಗೋಪಾಲ ಗೋಖಲೆ ಶಿಶಿಲ, ಅಶ್ವಿನಿ ಹೆಬ್ಬಾರ್ ಮುಂಡಾಜೆ, ಚಂದ್ರಕಾಂತ ಗೋರೆ ಕುದ್ಯಾಡಿ, ವಿವೇಕ ಕೇಳ್ಕರ್ ಕಾಜಿಮುಗೇರು, ಭಾರ್ಗವ ಮರಾಠೆ ಫಂಡಿಜೆ ಅವರನ್ನು ಆಯ್ಕೆ ಮಾಡಲಾಯಿತು.
ತಾಲೂಕಿನಲ್ಲಿರುವ ಚಿತ್ಪಾವನರ ಸಂಘಟನೆ, ಪರಸ್ಪರ ಬಾಂಧವ್ಯ, ಏಳಿಗೆ, ಸರ್ವಾಂಗೀಣ ಅಭಿವೃಧ್ಧಿ ನಮ್ಮ ಸಂಘದ ಮೂಲ ಧ್ಯೇಯೋದ್ದೇಶವಾಗಿದ್ದು, ಎಲ್ಲಾ ಸಮಾಜ ಬಾಂಧವರು ಸಕ್ರಿಯವಾಗಿ ಪಾಲ್ಗೊಂಡು ನಮ್ಮೊಂದಿಗೆ ಕೈ ಜೋಡಿಸಿ, ಪ್ರಬಲ ಸಂಘಟನೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ನೂತನ ಅಧ್ಯಕ್ಷರು ಅಪೇಕ್ಷೆ ಪಟ್ಟರು.