ಕಾಸರಗೋಡು: ಲಕ್ಷಾಂತರ ರೂ. ಆನ್ ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಜೀರಿಯಾ ಪ್ರಜೆ ಯೋರ್ವನನ್ನು ಕಾಸರಗೋಡು ಪೊಲೀಸರು ಬೆಂಗಳೂರಿನಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾದ ಆಂಟನಿ ಒಗ್ನರಾಬೊ ಎಫಿದಾರೆ ಬಂಧಿತ. ಸುಮಾರು 43. 20 ಲಕ್ಷ ರೂ . ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.
ಕಾಸರಗೋಡು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ವಿಶೇಷ ಪೊಲೀಸ್ ತಂಡ ಬೆಂಗಳೂರು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯಿಂದ ಲ್ಯಾಪ್ ಟಾಪ್ ಎಕ್ಸ್ ಟ್ರರ್ನಲ್ ಹಾರ್ಡ್ ಡಿಸ್ಕ್ , ಫೆನ್ ಡ್ರೈವ್, ನಾಲ್ಕು ಮೊಬೈಲ್ ಫೋನ್ , ವಿವಿಧ ಬ್ಯಾಂಕ್ ಗಳ ಏಳು ಎ ಟಿ ಎಂ ಕಾರ್ಡ್ ಗಳು, ವಿವಿಧ ದೇಶಗಳ ಮೂರು ಪಾಸ್ ಪೋರ್ಟ್ ಗಳು, ಡಾಲರ್ ನ ಫೋಟೋ ಕಾಫಿ ಗಳು, ಆಧಾರ್ ಕಾರ್ಡ್ , ಪಾನ್ ಕಾರ್ಡ್ , ಡ್ರೈವಿಂಗ್ ಲೈಸನ್ಸ್ , ಪಾಸ್ ಪೋರ್ಟ್ ನ ಪ್ರತಿಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಂಡದಲ್ಲಿ ಸಬ್ ಇನ್ಸ್ ಪೆಕ್ಟರ್ ಮಧುಸೂದನನ್ ಪಿ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಕೆವಿ ಜೋಸೆಫ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಬಿಜೋಶ್ ವರ್ಗೀಸ್, ಶಾಜು. ಕೆ ಮತ್ತು ಅನಿಲ್ ಕೆ.ಟಿ. ಮೊದಲಾದವರಿದ್ದರು.