ಸುರತ್ಕಲ್: ಸಸಿಹಿತ್ಲು ಹಳೆವಿದ್ಯಾರ್ಥಿ ಸಂಘ (ರಿ ) ಹಾಗೂ ಸಸಿಹಿತ್ಲು ಮತ್ತು ಮುಂಬೈ ಕರ್ನಾಟಕ ರಾಜ್ಯ ಪ್ರಶಸ್ತಿವಿಜೇತ ಸಸಿಹಿತ್ಲು ಯುವಕ ಯುವತಿ ಮಂಡಲ(ರಿ ) ಇವರ ವತಿಯಿಂದ 19/8/22 ರ ಅಪರಾಹ್ನ 2 ಗಂಟೆಯಿಂದ ಸುರತ್ಕಲ್ ನ ಸುಭಾಸ್ ಸಾಲ್ಯಾನ್ ವೇದಿಕೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಾಧವ ಶೆಟ್ಟಿಗಾರ್ ವಹಿಸಲಿದ್ದಾರೆ. ಅತಿಥಿಗಳಾಗಿ ಐ. ಒ. ಸಿ. ಒ ಜನಾರ್ಧನ ಸಾಲಿಯಾನ್, ಸಸಿಹಿತ್ಲು ಹಳೆವಿದ್ಯಾರ್ಥಿ ಸಂಘ ಶಿಕ್ಷಣ ಸಮಿತಿ ಅಧ್ಯಕ್ಷರಾದ ನಾಗೇಶ್ ಡಿ ಬಂಗೇರ, ಸಸಿಹಿತ್ಲು ದ. ಕ. ಜಿ. ಪ. ಹಿ. ಪ್ರಾ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಕ್ಲೋಟಿಲ್ಡ ಡಿ. ಲೋಬೊ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಾವಿತ್ರಿ ಸಾಲಿಯಾನ್ ದೀಪ ಪ್ರಜ್ವಲನೆ ಯ ಮೂಲಕ ನೆರವೇರಿಸಲಿದ್ದಾರೆ.
ಮಕ್ಕಳಿಗೆ ಬೆಣ್ಣೆ ತಿಂದ ಶ್ರೀ ಕೃಷ್ಣ ವೇಷ ಸ್ಪರ್ಧೆ, ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಯುವತಿ ಮಂಡಲದ ಅವರಿಂದ ವಿವಿಧ ವಿನೋದಾವಳಿ, ಯುವಕ ಮಂಡಲ ದವರಿಂದ ‘ಎಂಚ ನಿಕ್ಲೆಡ ಆವಾ’ ಎಂಬ ಕಿರು ನಾಟಕ ಪ್ರದರ್ಶನ ಹಾಗೂ ಹಳೆವಿದ್ಯಾರ್ಥಿ ಸಂಘ ಯುವಕ ಯುವತಿ ಮಂಡಲದವರಿಂದ ಹೆಣ್ಣಿನ ವಿವಿಧ ರೂಪಗಳನ್ನು ಪ್ರತಿಧ್ವನಿಸುವ ವಿಶಿಷ್ಟ ಪರಿಕಲ್ಪನೆಯ ‘ಪೊಣ್ಣತ್ತ್ ಮೋಲ್ ಶಕ್ತಿ’ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ.