News Karnataka Kannada
Sunday, May 12 2024
ಮಂಗಳೂರು

ಸುರತ್ಕಲ್: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Pratibha Puraskar programme on the occasion of Sri Krishna Janmashtami
Photo Credit :

ಸುರತ್ಕಲ್: ಸಸಿಹಿತ್ಲು ಹಳೆವಿದ್ಯಾರ್ಥಿ ಸಂಘ (ರಿ ) ಹಾಗೂ ಸಸಿಹಿತ್ಲು ಮತ್ತು ಮುಂಬೈ ಕರ್ನಾಟಕ ರಾಜ್ಯ ಪ್ರಶಸ್ತಿವಿಜೇತ ಸಸಿಹಿತ್ಲು ಯುವಕ ಯುವತಿ ಮಂಡಲ(ರಿ ) ಇವರ ವತಿಯಿಂದ 19/8/22 ರ ಅಪರಾಹ್ನ 2 ಗಂಟೆಯಿಂದ ಸುರತ್ಕಲ್ ನ ಸುಭಾಸ್ ಸಾಲ್ಯಾನ್ ವೇದಿಕೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಾಧವ ಶೆಟ್ಟಿಗಾರ್ ವಹಿಸಲಿದ್ದಾರೆ. ಅತಿಥಿಗಳಾಗಿ ಐ. ಒ. ಸಿ. ಒ ಜನಾರ್ಧನ ಸಾಲಿಯಾನ್, ಸಸಿಹಿತ್ಲು ಹಳೆವಿದ್ಯಾರ್ಥಿ ಸಂಘ ಶಿಕ್ಷಣ ಸಮಿತಿ ಅಧ್ಯಕ್ಷರಾದ ನಾಗೇಶ್ ಡಿ ಬಂಗೇರ, ಸಸಿಹಿತ್ಲು ದ. ಕ. ಜಿ. ಪ. ಹಿ. ಪ್ರಾ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಕ್ಲೋಟಿಲ್ಡ ಡಿ. ಲೋಬೊ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸಾವಿತ್ರಿ ಸಾಲಿಯಾನ್ ದೀಪ ಪ್ರಜ್ವಲನೆ ಯ ಮೂಲಕ ನೆರವೇರಿಸಲಿದ್ದಾರೆ.

ಮಕ್ಕಳಿಗೆ ಬೆಣ್ಣೆ ತಿಂದ ಶ್ರೀ ಕೃಷ್ಣ ವೇಷ ಸ್ಪರ್ಧೆ, ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಯುವತಿ ಮಂಡಲದ ಅವರಿಂದ ವಿವಿಧ ವಿನೋದಾವಳಿ, ಯುವಕ ಮಂಡಲ ದವರಿಂದ ‘ಎಂಚ ನಿಕ್ಲೆಡ ಆವಾ’ ಎಂಬ ಕಿರು ನಾಟಕ ಪ್ರದರ್ಶನ ಹಾಗೂ ಹಳೆವಿದ್ಯಾರ್ಥಿ ಸಂಘ ಯುವಕ ಯುವತಿ ಮಂಡಲದವರಿಂದ ಹೆಣ್ಣಿನ ವಿವಿಧ ರೂಪಗಳನ್ನು ಪ್ರತಿಧ್ವನಿಸುವ ವಿಶಿಷ್ಟ ಪರಿಕಲ್ಪನೆಯ ‘ಪೊಣ್ಣತ್ತ್ ಮೋಲ್ ಶಕ್ತಿ’ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು