ಬೆಳ್ತಂಗಡಿ: ಲೋಕಾಯುಕ್ತರಿಂದ ಸ್ವಯಂ ದೂರು ದಾಖಲಿಸಿಕೊಂಡ ಪ್ರಕರಣದ ಉಜಿರೆಯ ಸುರ್ಯ ರಸ್ತೆ ಬಳಿಯಿರುವ ಸಾರ್ವಜನಿಕ ಕೆರೆಗೆ ಕಾಯ್ದಿರಿಸಿದ ಸ್ಥಳವನ್ನು ದ .ಕ. ಜಿ. ಪ. ಉಪಕಾರ್ಯದರ್ಶಿ ಆನಂದಕುಮಾರ್ ಅವರು ಸೆ. 20 ರಂದು ಬೆಳ್ತಂಗಡಿ ತಾ.ಪ. ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಿದರು.
ಒಟ್ಟು 0.26 ಸೆಂಟ್ಸ್ ನಿವೇಶನದಲ್ಲಿ ತಾ.ಪ. 15ನೇ ಹಣಕಾಸು ಯೋಜನೆಯಲ್ಲಿ ಉಜಿರೆ ಗ್ರಾ.ಪ.ಉದ್ಯೋಗಖಾತ್ರಿ ಯೋಜನೆಯನ್ವಯ ರೂ 2.87 ಲಕ್ಷ, ಸ್ವಂತ ಸಂಪನ್ಮೂಲದಿಂದ ರೂ ಒಂದು ಲಕ್ಷ ಸೇರಿದಂತೆ ಒಟ್ಟು ರೂ 8.80 ಲಕ್ಷ ವೆಚ್ಚದಲ್ಲಿ ಸುತ್ತ ಕಾಂಪೌಂಡ್, ಮಧ್ಯೆ ರಸ್ತೆ ಹಾಗು ಗಾರ್ಡನ್ ನಿರ್ಮಿಸುವ ಕುರಿತು ಯೋಜನೆ ರೂಪಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ದ .ಕ.ಜಿ .ಪ. ಉಪಕಾರ್ಯದರ್ಶಿ ಆನಂದಕುಮಾರ್ ,ಎ .ಡಿ .ಪಿ. ಸಿ. ಕಿಶನ್, ತಾಂತ್ರಿಕ ಸಹಾಯಕ ನಿತಿನ್ ರೈ ,ಸಂಯೋಜಕ ರುತೇಶ್ ,ಬೆಳ್ತಂಗಡಿ ತಾ.ಪ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಸಹಾಯಕ ನಿರ್ದೇಶಕ ಪ್ರಶಾಂತ್, ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯದರ್ಶಿ ಜಯಂತ್ ಯು .ಬಿ. ಮೊದಲಾದವರು ಉಪಸ್ಥಿತರಿದ್ದರು