ಬೆಳ್ತಂಗಡಿ: ತಾಲೂಕು ತುಳು ಶಿವಳ್ಳಿ ಸಭಾ (ರಿ ) ದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿ ನೇಮಕವಾದ ಪದ್ಮವಿಭೂಷಣ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ . ವೀರೇಂದ್ರ ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತಾ, ತುಳು ಶಿವಳ್ಳಿ ಬ್ರಾಹ್ಮಣ ಸಮಾಜದ ನೂತನ ಸಭಾಭವನ ಕನ್ಯಾಡಿಯ “ಹರಿಹರಾನುಗ್ರಹ” ದ ಉದ್ಘಾಟನೆಯ ಆಮಂತ್ರಣ ಪತ್ರವನ್ನು ನೀಡುವುದರೊಂದಿಗೆ ಅವರನ್ನು ಗೌರವ ಪೂರ್ವಕ ವಾಗಿ ಆಹ್ವಾನಿಸಲಾಯಿತು.
ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಶರತ್ ಕೃಷ್ಣ ಪಡ್ವಟ್ನಾಯರು ಡಾ!ಹೆಗ್ಗಡೆಯವರಿಗೆ ಕನ್ಯಾಡಿಯಲ್ಲಿ ನಿರ್ಮಾಣಗೊಂಡಿರುವ ಸಭಾಭವನ ಹಾಗೂ ಕಾಮಗಾರಿ ನಡೆಯುತ್ತಿರುವ ಅಯ್ಯಪ್ಪ ಸ್ವಾಮಿ ಹಾಗೂ ಪರಿವಾರ ದೇವತೆಗಳ ಗುಡಿ ನಿರ್ಮಾಣದ ಪೂರ್ಣ ಮಾಹಿತಿಯನ್ನು ನೀಡಿದರು.
ಅಯ್ಯಪ್ಪ ಸ್ವಾಮಿ ಹಾಗೂ ಪರಿವಾರ ದೇವತೆಗಳ ಗುಡಿ ಪುನರ್ ಪ್ರತಿಷ್ಠಾಪನೆ ಬಗ್ಗೆ ಮಾರ್ಗದರ್ಶನ ನೀಡುವಂತೆ ಅವರಲ್ಲಿ ವಿಜ್ಞಾಪಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ತುಳು ಶಿವಳ್ಳಿ ಸಭಾ ದ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು, ತುಳು ಶಿವಳ್ಳಿ ಮ ಚ್ಚಿನ ವಲಯದ ಅಧ್ಯಕ್ಷ ಪ್ರೊ.! ಮಧೂರು ಮೋಹನ ಕಲ್ಲೂರಾಯ , ತಾಲೂಕು ತುಳು ಶಿವಳ್ಳಿ ಸಭಾ ದ ಉಪಾಧ್ಯಕ್ಷ ನಾಗೇಶ್ ರಾವ್, ಭಾಸ್ಕರ ರಾವ್, ಶಿಕ್ಷಕ ಸೂರ್ಯ ನಾರಾಯಣ ಪುತ್ರಾಯ,ನಿವೃತ್ತ ಶಿಕ್ಷಕ ಜನಾರ್ದನ ತೋಲ್ಪಾಡಿತ್ತಾಯ, ಹರ್ಷ ಕೆದ್ಲಾಯ ಮೊದಲಾದವರು ಉಪಸ್ಥಿತರಿದ್ದರು.