ಮಂಗಳೂರು: ನಿನ್ನೆ ಪ್ರವೀಣ್ ಅಂತಿಮಯಾತ್ರೆ ವೇಳೆ ಅಮಾಯಕರ ಮೇಲೆ ಲಾಠಿ ಚಾರ್ಜ್ ಗೆ ಆದೇಶಿಸಿದ ಹಾಗೂ ಲಾಠಿ ಚಾರ್ಜ್ ಮಾಡಿದ ಅಧಿಕಾರಿಗಳನ್ನು ತಕ್ಷಣ ಸಸ್ಪೆಂಡ್ ಮಾಡುವಂತೆ ವಿಶ್ವ ಹಿಂದು ಪರಿಷದ್ ನ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್ ಗೃಹ ಮಂತ್ರಿಗಳಿಗೆ ಆಗ್ರಹಿಸಿದ್ದಾರೆ .
ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರವೀಣ್ ಕೊಲೆ ನಡೆದು 2ದಿನಗಳಾದರೂ ಆರೋಪಿಗಳ ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿದೆ ಆದ್ದರಿಂದ ಈ ಪ್ರಕರಣವನ್ನು ವಿಶೇಷ ತನಿಖಾ ದಳ ಎಸ್ ಐಟಿ ರಚಿಸಿ ದಕ್ಷ ಎಸ್ಪಿ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂಬುದು ವಿಎಚ್ ಪಿ ಹಾಗೂ ಬಜರಂಗದಳದ ಮುಖ್ಯಮಂತ್ರಿ ಅವರಿಗೆ ಆಗ್ರಹಿಸಲಾಗಿದೆ ಎಂದರು .
ಜೊತೆಗೆ ನಿನ್ನೆ ಅಮಾಯಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಈ ಹಿಂದಿನ ಗಲಭೆಗಳಾದ ಈ ರೀತಿ ಲಾಠಿಚಾರ್ಜ್ ಆಗಿಲ್ಲ ಒಬ್ಬ ಹಿರಿಯ ವ್ಯಕ್ತಿಯ ಮೇಲೂ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ನಿನ್ನೆ ಲಾಠಿಚಾರ್ಜ್ ನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸುತ್ತೇವೆ ಹಾಗೂ ಲಾಠಿ ಚಾರ್ಜ್ ಗೆ ಆರ್ಡರ್ ನೀಡಿದ ಪೊಲೀಸ್ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು
ಜೊತೆಗೆ ವಿಶ್ವ ಹಿಂದು ಪರಿಷತ್ ವತಿಯಿಂದ ರಾಜ್ಯಾದ್ಯಂತ ನಾಳೆ ತಾಲ್ಲೂಕು ಕೇಂದ್ರಗಳಲ್ಲಿ ವಿಎಚ್ ಪಿ ಹಾಗೂ ಬಜರಂಗದಳದ ವತಿಯಿಂದ ಶ್ರದ್ಧಾಂಜಲಿ ಸಭೆಗೆ ನಿರ್ಧಾರ ಮಾಡಲಾಗಿದೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು ಮುಖಂಡರಾದ ಮುರಳಿಕೃಷ್ಣ ಹಂಸತಡ್ಕ ,ಭುಜಂಗ ಕುಲಾಲ್ ,ಪುನೀತ್ ಅತ್ತಾವರ , ಭರತ್ ಕುಮ್ಡೇಲು ,ಉಪಸ್ಥಿತರಿದ್ದರು