News Karnataka Kannada
Sunday, May 12 2024
ಮಂಗಳೂರು

ಎನ್ಇಪಿ ಪಠ್ಯ ಸರಿಯಾಗಿ ಓದಿ, ಮತ್ತೆ ಮಾತನಾಡಿ: ಕ್ಯಾ‌.ಗಣೇಶ್ ಕಾರ್ಣಿಕ್ ಸವಾಲು

Read NEP text properly, speak again: Ganesh Karnik
Photo Credit : News Kannada

ಮಂಗಳೂರು: ಕನಿಷ್ಠ ಎನ್ಇಪಿ ಕರಡು ಪ್ರತಿಯನ್ನು ಓದದೆ ವಿದ್ಯಾರ್ಥಿಗಳ ವ್ಯಕ್ತಿತ್ವವಿಕಸನ ಸಂಬಂಧಿಸಿದ ಪಠ್ಯವನ್ನು ಕಿತ್ತೆಸೆಯುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಹೇಳುತ್ತಿದೆ. ಆ ಪಠ್ಯದಲ್ಲಿ ಒಂದು ಶಬ್ದ ಆಕ್ಷೇಪಾರ್ಹ ಎನಿಸಿದ್ದಲ್ಲಿ ನಾವು ಯಾರೂ ಆ ಬಗ್ಗೆ ಮಾತನಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ‌.ಗಣೇಶ್ ಕಾರ್ಣಿಕ್ ಸವಾಲೆಸೆದರು.

ನಗರದಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುವ ಬೇಜವಾಬ್ದಾರಿ ವರ್ತನೆ ಯಾವ ರಾಜಕೀಯ ಪಕ್ಷವೂ ಮಾಡಬಾರದು. ಎನ್ಇಪಿ ಪಠ್ಯ ಸಂವಿಧಾನ ವಿರೋಧಿ ಎಂಬ ರಾಜಕೀಯ ಕಾರಣದ ಹೇಳಿಕೆ ನೀಡುವುದು ಮೂರ್ಖತನ. ಹೆಡ್ಗೆವಾರ್, ಚಕ್ರವರ್ತಿ ಸೂಲಿಬೆಲೆ ಬರೆದಿರುವುದು, ವೀರ ಸಾವರ್ಕರ್ ಪಠ್ಯವೆನ್ನುವ ಕಾರಣಕ್ಕೆ ಪಠ್ಯವನ್ನು ಕಿತ್ತೆಸೆಯುತ್ತೇವೆ ಎನ್ನುವುದು ಸರಿಯಲ್ಲ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಚಪ್ಪಡಿಕಲ್ಲು ಹಾಕುವ ಪ್ರಯತ್ನ ಬೇಡ ಎಂದು ಹರಿಹಾಯ್ದರು.

ನಾನು ಪ್ರಾಮಾಣಿಕವಾಗಿ ಹೇಳುವುದೇನೆಂದರೆ ಸಿಎಂ ಸಿದ್ದರಾಮಯ್ಯ ಆಗಲಿ, ಇಂದಿನ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಾಗಲಿ, ಸಚಿವ ಡಿ.ಸುಧಾಕರ್ ಅವರಾಗಲೀ ಎನ್ಇಪಿ ಪುಸ್ತಕವನ್ನು ಖಂಡಿತವಾಗಿಯೂ ಓದಿಲ್ಲ. ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಅವರಿಗೆ ಈ ಪುಸ್ತಕವನ್ನು ನೀಡಿ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿತ್ತು. ಆದರೆ, ಅವರು ಓದುವ ಪಯತ್ನ ಮಾಡಲಿಲ್ಲ. ಈ ಪುಸ್ತಕದಲ್ಲಿ ಎನ್ಇಪಿಯನ್ನು ರಾಜ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾವಣೆ ಮಾಡುವ ಅವಕಾಶ ನೀಡಲಾಗಿದೆ.

ಜೊತೆಗೆ ರಾಜ್ಯಕ್ಕೆ ಹಿತವಾಗುವ ಪಾಲಿಸಿ ತರಲು ಅವಕಾಶ ನೀಡಲಾಗಿತ್ತು‌. ಆದರೆ ಎನ್ಇಪಿಯಲ್ಲಿಯೇ ಎಸ್ಇಪಿ ಮಾಡುವ ಅವಕಾಶ ಇದೆ ಎಂಬುದು ಅವರಿಗೆ ಗೊತ್ತೇ ಇಲ್ಲ. ಎನ್ಇಪಿ ವಿದ್ಯಾರ್ಥಿಗಳಲ್ಲಿ ಸ್ವಭಾವ ಸಹಜವಾದ ಪ್ರಶ್ನಿಸುವ, ಸೃಜನಶೀಲತೆ, ಕುತೂಹಲ, ಆವಿಷ್ಕಾರ ಇದನ್ನು ಉಳಿಸಿಕೊಂಡು ಎರಡನೇ ಹಂತದಲ್ಲಿ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡು ಬೆಳೆಯಲು ಅವಕಾಶ ನೀಡುತ್ತದೆ. ಆದರೆ ಇವರು ಓದದಿದ್ದರಿಂದ ಇದ್ಯಾವುದು ಅವರಿಗೆ ತಿಳಿದಿಲ್ಲ ಎಂದು ಗಣೇಶ್ ಕಾರ್ಣಿಕ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು