ಬಂಟ್ವಾಳ: ದೇವರ ಆಶೀರ್ವಾದ, ಕ್ಷೇತ್ರದ ಜನರ ಸಹಕಾರದಿಂದ ಐದು ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರವನ್ನು “ನವ ಬಂಟ್ವಾಳ” ವಾಗಿ ಮಾರ್ಪಾಡು ಮಾಡಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಅವರು ಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆದ ಸುಮಾರು 33 ಕೋಟಿ ರೂ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಸಿದ ಬಳಿಕ ಬಾಳ್ತಿಲ ಗ್ರಾಮಪಂಚಾಯತ್ ನಲ್ಲಿ ನಡೆದ ಫಲಾನುಭವಿಗಳಿಗೆ ಸವಲತ್ತು ವಿತರಣಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಕಾರದಿಂದ ಸಿಗುವ ಸವಲತ್ತುಗಳನ್ನು ನನ್ನ ಆತ್ಮಸಾಕ್ಷಿಯಾಗಿ ಕರ್ತವ್ಯದ ನೆಲೆಯಲ್ಲಿ ಮಾಡಿದ್ದೇನೆ ಎಂಬ ನಂಬಿಕೆ ಇದೆ.
ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಆದ್ಯತೆಯ ನೆಲೆಯಲ್ಲಿ ಮಾಡಿದ್ದೇವೆ ಎಂಬ ಭರವಸೆ ನಮಗಿದೆ.
ಬಿಜೆಪಿ ಪಕ್ಷದ ಸಂಘಟನೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರು ಸಿದ್ಧವಾಗಿದ್ದಾರೆ ಎಂದರು.
ಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಿಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜ್ಯೋತಿ ನಾಯಕ್, ಸದಸ್ಯರಾದ ಆನಂದ ಶೆಟ್ಟಿ, ವಿಠಲ ನಾಯ್ಕ್, ಶಿವರಾಜ್, ಮಲ್ಲಿಕಾ, ಆಶೋಕ, ಚಂದ್ರಶೇಖರ, ಚೈತ್ರ, ಬಿ.ಕೆ.ಅಣ್ಣು ಪೂಜಾರಿ, ಶೋಭಾ, ರಾಜೀವ, ಹರಿಣಾಕ್ಷಿ, ಮಾಜಿ.ಜಿ.ಪಂ.ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್ ಮಾಜಿ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಪ್ರಮುಖರಾದ ಮೋಹನ್ ಪಿ.ಎಸ್, ಸುರೇಶ್ ಶೆಟ್ಟಿ ಕಾಂದಿಲ, ಕೃಷ್ಣಪ್ಪ ಪೂಜಾರಿ ತೋಟ, ರಮೇಶ್ ಕುದ್ರೆಬೆಟ್ಟು, ನಿತಿನ್ ಕುದ್ರೆಬೆಟ್ಟು, ನರೇಂದ್ರ ರೈ, ಪೂರ್ಣಿಮಾ ನೀರಪಾದೆ, ಪಿ.ಡಿ.ಒ.ಸಂಧ್ಯಾ, ಗ್ರಾಮ ಕರಣೀಕೆ ಯಶ್ವಿತಾ, ಬಾಳ್ತಿಲ ಸಮುದಾಯ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ| ರೋಶನಿ ಪೂಂಜ, ಪಂ.ಕಾರ್ಯದರ್ಶಿ ಸುರೇಖಾ ಮತ್ತಿತರರು ಉಪಸ್ಥಿತರಿದ್ದರು.
ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನಗಳ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ , ಬಾಳ್ತಿಲ ಅಂಗನವಾಡಿ ಕಾರ್ಯಕರ್ತೆ ಸೌಮ್ಯ ಅವರನ್ನು ಗೌರವಿಸಲಾಯಿತು.