News Karnataka Kannada
Tuesday, May 07 2024
ಮಂಗಳೂರು

ಎ. 2ರಿಂದ 6ರ ವರೆಗೆ ಶ್ರೀ ಮಲರಾಯ ಧೂಮಾವತಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

Press
Photo Credit : NewsKarnataka

ಮಂಗಳೂರು: ಸುಮಾರು 725 ವರ್ಷಗಳ ಇತಿಹಾಸವಿರುವ ಉರ್ವ ಚಿಲಿಂಬಿಯ ಶ್ರೀ ಮಲರಾಯ ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನವು ಅತ್ಯಂತ ಕಾರಣೀಕವುಳ್ಳ ಪ್ರಾಚೀನ ದೈವಸ್ಥಾನವಾಗಿದ್ದು, ನಂಬಿಕೊಂಡು ಬಂದಂತಹ ಭಕ್ತರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿ, ಭಕ್ತರ ಪಾಲಿನ ಚಿಲಿಂಬಿಯಲ್ಲಿ ಗ್ರಾಮದ ದೈವಗಳಾಗಿ ಆರಾಧಿಸಲ್ಪಡುತ್ತಿದೆ.

ಕಳೆದ 1975ರಲ್ಲಿ ಈ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ, ಅಷ್ಟದಿಗ್ವಂಧ, ಬ್ರಹ್ಮಕಲಶ ಮತ್ತುಉರ್ವ ಚಿಲಿಂಬಿಯ ಶ್ರೀ ಮಲರಾಯ ಧೂಮಾವತಿ ಹಾಗೂ ಪರಿವಾರ ದೈವಗಳವು ನಡೆದು ನಂತರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆಗಿ ಈ 2024ನೇ ವರ್ಷದ ಎಪ್ರಿಲ್ 2ರಿಂದ ನಡೆಯಲಿದೆ.

ಎಪ್ರಿಲ್ 2ರ ಮಂಗಳವಾರ ಸಂಜೆ 6.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವಿದ್ದು ಸ್ಮರಣಾ ಸಂಚಿಕೆ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ನಂತರ “ದೈವದ ಬೂಲ್ಯ” ಎಂಬ ಜಾನಪದ ಭಕ್ತಿ ಪ್ರಧಾನ ತುಳುನಾಟಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆಯಲಿದೆ.

ಹಾಗೆಯೇ ಎಪ್ರಿಲ್ ೩ ರಂದು ಬುಧವಾರ ಸಂಜೆ 6.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮವಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ಅಧ್ಯಕ್ಷೆರ್” ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಅದೇ ರೀತಿ ಎಪ್ರಿಲ್ ೪ ರ ಗುರುವಾರ ರಾತ್ರಿ 8.30ಕ್ಕೆ ಬ್ರಾಹ್ಮಣ ಕನ್ಯ ಮತ್ತು ಅರಬೀ ದೈವಗಳ ನೇಮೋತ್ಸವ ನಡೆಯಲಿದೆ, ಎಪ್ರಿಲ್ 05ರಂದು ಶುಕ್ರವಾರ ರಾತ್ರಿ 9.00 ಗಂಟೆಗೆ ಶ್ರೀ ಮಲರಾಯ ದೈವ ಹಾಗೂ ಶ್ರೀ ಬಂಟ ದೈವದ ನೇಮೋತ್ಸವವು ನಡೆಯಲಿದೆ. ಹಾಗೆಯೇ ಎಪ್ರಿಲ್ 06ರ ಶನಿವಾರ ರಾತ್ರಿ 9.00 ಗಂಟೆಗೆ ಶ್ರೀ ಧೂಮಾವತಿ ದೈವ, ಶ್ರೀ ಬಂಟ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ನಡೆಯಲಿದೆ.

ಈ ಮೇಲಿನ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಊರ ಪರವೂರ ಭಕ್ತಾಧಿಗಳು ಭಾಗವಹಿಸಿ ಶ್ರೀ ದೈವಗಳ ಸಿರಿ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸಮಿತಿಯ ಅಧ್ಯಕ್ಷರಾದ ಶ್ರೀ ಎ.ವಿ. ಸುರೇಶ್ ರಾವ್‌ರವರು ತಿಳಿಸಿದ್ರೆದಾ.

ಗೌರವಾಧ್ಯಕ್ಷರಾದ ಬಿ.ಜಿ. ಸುವರ್ಣ, ಸದಾನಂದ ಅಮೀನ್, ಉಪಾಧ್ಯಕ್ಷರಾದ ತುಕರಾಮ್ ಕಂಟ್ರಕ್ಟರ್, ಯು. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಸಾಲ್ಯಾನ್, ಕೋಶಾಧಿಕಾರಿ ಸೋಮಶೇಖ‌ರ್ ಹೊಗೆಬೈಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು