ಕೋಲ್ಕತ್ತಾ: ನೆನ್ನ ದೇಶದ ಹಲವೆಡೆ ಧಾರಕಾರ ವಾಗಿ ಮಳೆ ಸುರಿದಿದೆ. ಬಹಳ ದಿನಗಳ ನಂತರ ವರುಣ ಭೂಮಿಗೆ ತಂಪೆರದಿದ್ದಾನೆ. ಆದರೆ ಬಂಗಾಳದಲ್ಲಿ ನಿನ್ನೆ ಗುಡುಗು-ಸಿಡಿಲಿಗೆ ಆರು ಜನರು ಸಾವನ್ನಪ್ಪಿದ್ದಾರೆ.
ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ನಾಡಿಯಾ, ಪುರುಲಿಯಾ, ಪುರ್ಬಾ ಬರ್ಧಮಾನ್ ಜಿಲ್ಲೆ ಸೇರಿದಂತೆ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಆರು ಜನರು ಗುಡುಗು ಸಿಡಿಲಿಗೆ ಸಾವನ್ನಪ್ಪಿದ್ದಾರೆ. ಮೃತರಾದವರಲ್ಲಿ ದಂಪತಿಗಳು ಸೇರಿದ್ದಾರೆ.
ಮಳೆ, ಗುಡುಗು-ಸಿಡಿಲಿನಿಂದಾಗಿ ಈಸ್ಟರ್ನ್ ರೈಲ್ವೆಯ ಸೀಲ್ದಾಹ್ನಲ್ಲಿ ರೈಲು ಸೇವೆಯಲ್ಲಿ ಕೊಂಚ ವ್ಯತ್ಯಯ ಕಂಡುಬಂತು. ರಾತ್ರಿ-8ರಿಂದ 9.15ರವರೆಗೆ ರೈಲು ಸಂಚಾರಕ್ಕೆ ಸಮಸ್ಯೆಯಾಯಿತು. ಹವಾಮಾನ ವೈಪರೀತ್ಯದಿಂದ ಕೋಲ್ಕತ್ತಾ ತೆರಳುವ ವಿಮಾನಗಳು ಕೂಡ ರದ್ದಾದವು.