News Karnataka Kannada
Saturday, April 27 2024
ಮಂಗಳೂರು

ಕಿನ್ನಿಗೋಳಿ: ದ್ವೀಪದಂತಾದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶುಂಠಿಪಾಡಿ

Shunthipadi under Aikala Grama Panchayath of The Island
Photo Credit : News Kannada

ಕಿನ್ನಿಗೋಳಿ: ನಿರಂತರ ಮಳೆಯಿಂದಾಗಿ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶುಂಠಿಪಾಡಿಯಲ್ಲಿ ಶಾಂಭವಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ‌ ಈ ಭಾಗದ ಸುಮಾರು 50 ಕುಟುಂಬಗಳು ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುವಂತಾಗಿದೆ.

ಶುಂಠಿಪಾಡಿ ಸದ್ಯ ದ್ವೀಪದಂತಾಗಿದೆ. ಮಳೆಯಿಂದಾಗಿ ಇಲ್ಲಿಗೆ ಸಂಪರ್ಕ‌ ಕಲ್ಪಿಸುವ ರಸ್ತೆ ಪ್ರತೀ ವರ್ಷದ ಮಳೆಗಾಲದಲ್ಲಿ ಮುಳುಗುತ್ತಿರುತ್ತದೆ. ಈ ರಸ್ತೆ ಕುದ್ರಿಪದವು ಸಂಪರ್ಕಿಸುತ್ತದೆ. ಅಲ್ಲಿಂದ ಒಂದು ಬದಿಯ ರಸ್ತೆ ಕಿನ್ನಿಗೋಳಿ, ಮತ್ತೊಂದು ಬದಿಯ ರಸ್ತೆ ಕುದ್ರಿಪದವು ಮೂಲಕ ಮುಡಬಿದಿರೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಶುಂಠಿಪಾಡಿ/ಕುದ್ರಿ ಪದವು ಸಂಪರ್ಕಿಸುವ ರಸ್ತೆಯ ಎರಡೂ ಬದಿಯಲ್ಲಿ ರಸ್ತೆ ಹದಗೆಟ್ಟಿದ್ದು ಜನ ಓಡಾಡಕ್ಕೆ ತೊಂದರೆ ಉಂಟು ಮಾಡುತ್ತಿದೆ. ರಸ್ತೆಯ‌ ಅರ್ಧಕ್ಕೆ‌ ಡಾಂಬರೀಕರಣ ಮಾಡಿ ಬಿಡಲಾಗಿದೆ. ಇದರಿಂದಾಗಿ‌‌ ಮಳೆಗಾಲ‌ ಆರಂಭವಾಗುತ್ತಿದ್ದಂತೆಯೇ ರಸ್ತೆ ಕಂಬಳದ ಗದ್ದೆಯಂತಾಗುತ್ತದೆ‌ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಭಾಗದ ಮಕ್ಕಳು ಶಾಲೆಗಳಿಗೆ‌ ತೆರಳಬೇಕಾದರೆ, ಇದೇ ರಸ್ತೆಯನ್ನು ಬಳಸಬೇಕಿದೆ. ಆದರೆ, ಮಳೆಯ ನೀರಿಗೆ ರಸ್ತೆ ಮುಳುಗಡೆಯಾಗುತ್ತಿರುವುದರಿಂದ ಮಕ್ಕಳು ಶಾಲೆಗೆ ಹೋಗುವುದೂ ಅಸಾಧ್ಯವಾಗಿದೆ ಎಂದು ಸ್ಥಳಿಯರಾದ ನವೀನ್ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಐಕಳ ಗ್ರಾಮ ಪಂಚಾಯತ್ ಮತ್ತು ಜನಪ್ರತಿನಿಧಿಗಳು ಶುಂಠಿಪಾಡಿ ಗ್ರಾಮಸ್ಥರಿಗೆ ಶಾಶ್ವತ ಪರಿಹಾತ ಕಲ್ಪಿಸಬೇಕೆಂದು ಗ್ರಾಮಸ್ತರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು