ಮಂಗಳೂರು: ಇವತ್ತು ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಕದ್ರಿಯ ಶಿವಬಾಗ್ ಸಮೀಪದ ವೈನ್ ಸ್ಪಿರಿಟ್ ಕಟ್ಟಡದ ಕೆ ಎಫ್ ಸಿ ಅಂಗಡಿಯ ಬೋರ್ಡ್ ಕೆಳಗೆ ಪಾರ್ಕ್ ಮಾಡಿದ್ದ 2 ಕಾರುಗಳ ಮೇಲೆ ಬಿದ್ದು ಕಾರುಗಳು ಹಾನಿಗೊಳಗಾಗಿದೆ.
ಈ ಕುರಿತು ಕೆ ಎಫ್ ಸಿ ಅಂಗಡಿಯ ಮಾಲೀಕರ ಬಳಿ ಪ್ರಶ್ನಿಸಿದಾಗ ಅವರು ಉಡಾಫೆಯ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಅವರು ಇದರ ಬಗ್ಗೆ ಪೊಲೀಸರಿಗೂ ಮಾಹಿತಿಯನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.
ಸ್ಥಳೀಯರ ಪ್ರಕಾರ ಕೆ ಎಫ್ ಸಿ ಅಂಗಡಿಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಈ ಕುರಿತು ಸ್ಥಳೀಯರೇ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ.