ಮಂಗಳೂರು: ಮಂಗಳೂರಿನ ಬಲ್ಮಠ ದ ಯೇನಪೋಯ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ದೀಕ್ಷಾರಂಭ ಕಾರ್ಯಕ್ರಮ ದಿನಾಂಕ 7-10-22 ರಂದು ನೆರವೇರಿತು.
ಈ ಸಮಾರಂಭ ದಲ್ಲಿ ಪದ್ಮಶ್ರಿ ಪುರಸ್ಕೃತ ರಾದ ಹರೇಕಳ ಹಾಜಬ್ಬಾ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ವನ್ನು ಸ್ವೀಕರಿಸುತ್ತಾ, ತನ್ನ ಸಮಾಜ ಸೇವೆಯ ಯಾತ್ರೆಯಲ್ಲಿ ಕನಸನ್ನು ಈಡೇರಿಸುವಲ್ಲಿ ತನ್ನ ನಿಸ್ವಾರ್ಥ ಸೇವೆಯನ್ನು ವಿವರಿಸುತ್ತಾ ವಿದ್ಯಾರ್ಥಿ ಗಳನ್ನು ಪ್ರೆರೇಪಿಸಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ್ ಎ. ಭಾಗವತ್ ಹರೇಕಳ ಹಾಜಬ್ಬರನ್ನು ಸನ್ಮಾನಿಸಿದರು. ಪ್ರಾಂಶುಪಾಲರು ವಿದ್ಯಾರ್ಥಿ ಗನ್ನು ಉದ್ದೇಶಿಸಿ ಮಾತನಾಡುತ್ತಾ, ಜೀವನದಲ್ಲಿ ಸರಳತೆ ಹೇಗೆ ಗುರಿ ತಲುಪಿ ಯಶಸ್ವಿಯಾಗಲು ಕಾರಣವಾಗುತ್ತದೆ ಎಂದು ವಿವರಿಸಿದರು.
ಕಾಲೇಜಿನ ಉಪಾಪ್ರಾಂಶುಪಾಲ ರಾದ ಡಾ.ಶರೀನಾ ಪಿ. ಮತ್ತು ಡಾ. ಜೀವನ್ ರಾಜ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಹಾಯಕ ಪ್ರಾದ್ಯಾಪಕರಾದ ನಿಯಾಜ್ ರವರು ಕಾರ್ಯಕ್ರಮ ಆಯೋಜಿಸಿದರು. ಸಹಾಯಕ ಪ್ರಾದ್ಯಾಪಕರಾದ ಶಾಹಿದ್ ರವರು ಸ್ವಾಗತಿಸಿದರು. ಉಪನ್ಯಾಸಕಿ ಶಿಪ್ರಾ ರವರು ಕಾರ್ಯಕ್ರಮ ವನ್ನು ನಿರೂಪಿಸಿದರು.