ಮಂಗಳೂರು: ಆ.5ರಂದು ಮಹಾಪೌರರು, ಮಾನ್ಯ ಶಾಸಕರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿರುವಂತೆ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕ್ಲಾಕ್ ಟವರ್ನಿಂದ ಎ.ಬಿ. ಶೆಟ್ಟಿ ವೃತ್ತ, ಎ.ಬಿ ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತ, ಹ್ಯಾಮಿಲ್ಟನ್ ವೃತ್ತದಿಂದ ರಾವ್ ಆಂಡ್ ರಾವ್ ವೃತ್ತ ಹಾಗೂ ರಾವ್ ಆಂಡ್ ರಾವ್ ವೃತ್ತದಿಂದ ಕ್ಲಾಕ್ ಟವರ್ವರೆಗಿನ ರಸ್ತೆಯಲ್ಲಿ ಅತ್ಯಧಿಕ ವಾಹನ ಸಂಚಾರ ವಿರುವ ಕಾರಣ ಹಾಗೂ ಸದ್ರಿ ಪ್ರದೇಶದಲ್ಲಿ ಸರ್ಕಾರಿ ಕಛೇರಿಗಳು, ವಾಣಿಜ್ಯ ಕೇಂದ್ರಗಳಿಗೆ ಹಾದು ಹೋಗುವ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಮತ್ತು ಸದ್ರಿ ರಸ್ತೆಯು ಪುರಭವನ, ನೆಹರೂ ಮೈದಾನ, ಸರ್ವಿಸ್ ಬಸ್ ನಿಲ್ದಾಣ ಮೂರು ಸಾರ್ವಜನಿಕ ಚಟುವಟಿಕೆಯುಳ್ಳ ಕೇಂದ್ರಗಳಾಗಿರುವ ಹಿನ್ನಲೆಯಲ್ಲಿ ಮೇಲೆ ಕಾಣಿಸಿದ ರಸ್ತೆಯನ್ನು ಉಪ ರಸ್ತೆಯನ್ನಾಗಿ ಪರಿಗಣಿಸಬೇಕಾಗಿರುವ ಹಿನ್ನಲೆಯಲ್ಲಿ ಈಗಾಗಲೇ ಏಕಮುಖ ಸಂಚಾರಕ್ಕೆ ಅನುಗುಣವಾಗಿ ರಸ್ತೆಗಾಗಿ ಜಂಕ್ಷನ್ಗಳನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ.
ಸದ್ರಿ ವ್ಯವಸ್ಥೆಯು ಕಳೆದ ಹಲವು ತಿಂಗಳು ಪ್ರಾಯೋಗಿಕವಾಗಿ ಅನುಷ್ಠಾಣಗೊಂಡಿದ್ದು, ಸದ್ರಿ ಏಕಮುಖ ರಸ್ತೆ ಹಾಗೂ ಈಗಾಗಲೇ ಅಭಿವೃದ್ಧಿ ಪಡಿಸಿರುವ ಜಂಕ್ಷನ್ಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಲುವಾಗಿ ಸದ್ರಿ ಸಭೆಯಲ್ಲಿ ತೀರ್ಮಾನಿಸಿ, ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಸಾಮಾಜಿಕ ತಾಣದಲ್ಲಿ ಪ್ರಕಟಿಸಿಲು ಸೂಚಿಸಿರುತ್ತಾರೆ.
ಅದರಂತೆ, ಸಾರ್ವಜನಿಕರು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಜಾಲತಾಣ, ಫೇಸ್ಬುಕ್, ಟ್ವಿಟರ್, ಇನಾಗ್ರಾಮ್ನಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್ ಲಿಂಕ್ ಮುಖಾಂತರ ಸದ್ರಿ ಪ್ರಸ್ತಾವನೆಯ ಕುರಿತು ಅಭಿಪ್ರಾಯ ನೀಡುವಂತೆ ಕೋರಿದೆ. ಸಾರ್ವಜನಿಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಕೊನೆಯ ದಿನಾಂಕ: 04.09.2022 ಆಗಿರುತ್ತದೆ.