ಮಂಗಳೂರು: ಪಾಲಿಕೆಯ ಹಾಲಿ ವರ್ಷದ 23ನೇ ಸಾಲಿನ ಮೇಯರ್ ಮೀಸಲಾತಿ ವಿವಾದ ಇನ್ನೂಬಗೆಹರಿಯದಿರುವ ಮಧ್ಯೆಯೇ ಮುಂದಿನ ಸಾಲಿನ 24ನೇ ಅವಧಿಯ ಮೇಯರ್ ಉಪ ಮೇಯರ್ ಹುದ್ದೆಗೆ ರಾಜ್ಯ ಸರಕಾರ ಬುಧವಾರ ಮೀಸಲಾತಿ ಪ್ರಕಟಿಸದಿರುವುದು ಗೊಂದಲಕ್ಕೆ ಕಾರಣವಾಗಿದೆ . ಮಂಗಳೂರು ಮಹಾನಗರ ಪಾಲಿಕೆಯಾಗಿ 24ಅವಧಿ ಗೆ ಮೇಯರ್ ಹುದ್ದೆ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಎಂಬುದಾಗಿ ರಾಜ್ಯ ಸರ್ಕಾರ ಬುಧವಾರ ಪ್ರಕಟಿಸಿದೆ.
ಪಾಲಿಕೆಯ 23ನೇ ಸಾಲಿನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ ಉಪಮೇಯರಾಗಿ ಸುಮಂಗಲ ರಾವ್ ಅಧಿಕಾರದಲ್ಲಿದ್ದಾರೆ 23ನೇ ಮೇಯರ್ ಮೀಸಲಾತಿ ಕಳೆದ ವರ್ಷವೇ ಬಂದಿತ್ತು.
ಮಂಗಳೂರು ಪಾಲಿಕೆ ಇಪ್ಪತ್ತ ಮೂರನೇ ಅವಧಿಗೆ ಮೇಯರ್ ಸ್ಥಾನವನ್ನು ಸಾಮಾನ್ಯ ಅಭ್ಯರ್ಥಿಗೆ ಹಾಗೂ ಉಪ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಎ ಮಹಿಳೆ ವರ್ಗಕ್ಕೆ ಮೀಸಲಿರಿಸಿ ಕಳೆದ ವರ್ಷವೇ ಸರ್ಕಾರ ಆದೇಶಿಸಿತ್ತು .ಅದರಂತೆ ಮೇಯರ್ ಉಪಮೇಯರ್ ಚುನಾವಣೆ ಮಾರ್ಚ್ ಎರಡರಂದು ನಿಗದಿಯಾಗಿತ್ತು ಆದರೆ ಮಹಾರಾಷ್ಟ್ರದ ರಾಹುಲ್ ರಮೇಶ್ ಅವರು ಸುಪ್ರೀಂಕೋರ್ಟ್ನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿದ ಕಾರಣದಿಂದ ಸರಕಾರ ಮಂಗಳೂರು ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಲಿಲ್ಲ.
ಸಾಮಾನ್ಯವಾಗಿ ಆಯಾಯ ವರ್ಷದ ಮೇಯರ್ ಉಪಮೇಯರ್ ಮೀಸಲಾತಿ ಆಯಾ ವರ್ಷವೇ ಸರಕಾರ ಪ್ರಕಟ ಮಾಡುತ್ತದೆ ಆದರೆ ಮಂಗಳೂರು ಪಾಲಿಕೆ ಹಾಗೂ ರಾಜ್ಯದ ಉಳಿದ ಪಾಲಿಕೆಗಳ ನಡುವೆ 1ವರ್ಷದ ಆಡಳಿತಾವಧಿ ವ್ಯತ್ಯಾಸವಿದೆ ಹೀಗಾಗಿ ಮಂಗಳೂರು ಪಾಲಿಕೆಗೆ ಇಪ್ಪತ್ಮೂರನೇ ಅವಧಿಯ ಮೇಯರ್ ಉಪ ಮೇಯರ್ ಆಯ್ಕೆ ನಡೆಯಲಿದ್ದರೆ ಉಳಿದ ಪಾಲಿಕೆಗಳಲ್ಲಿ ಈ ಬಾರಿ 24ನೇ ಅವಧಿ ನಡೆದಿದೆ .ಕಳೆದ ವರ್ಷ ಮೇಯರ್ ಉಪಮೇಯರ್ ಮೀಸಲಾತಿ ಮಂಗಳೂರು ಪಾಲಿಗೆ ಬಂದಿತ್ತು .ಅದು ಈ ವರ್ಷ ಅನುಷ್ಠಾನವಾಗದೆ ಮುಂದಿನ ಸಾಲಿನ ಮೀಸಲಾತಿ ಬುಧವಾರ ಪ್ರಕಟವಾಗಿದೆ.
ಪಾಲಿಕೆಯ ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲಿ ದಿವಾಕರ್ ಪಾಂಡೇಶ್ವರ ಗದ್ದುಗೇರಿದರೆ ಎರಡನೇ ಅವಧಿಗೆ ಸಾಮಾನ್ಯ ಮೀಸಲು ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಪ್ರೇಮಾನಂದ ಶೆಟ್ಟಿ ಅವರಿಗೆ ಮೇಯರ್ ಹುದ್ದೆಗೆ ಒಲಿದು ಬಂದಿತ್ತು . ಕಳೆದ ವರ್ಷ ಸರಕಾರ ಪ್ರಕಟಿಸಿದ ಮೂರನೇ ಅವಧಿಯ ಮೀಸಲಾತಿ ಸಾಮಾನ್ಯ ಅಭ್ಯರ್ಥಿಗೆ ನಿಗದಿಯಾಗಿತ್ತು ಆದರೆ ಚುನಾವಣೆ ನಡೆದಿಲ್ಲ ,ಇದೀಗ ನಾಲ್ಕನೇ ಅವಧಿಯ ಮೇಯರ್ ಮೀಸಲಾತಿಯನ್ನು ಸಾಮಾನ್ಯ ಅಭ್ಯರ್ಥಿಗೆ ನಿಗದಿ ಮಾಡಿರುವುದು ಪಾಲಿಕೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.