ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಾಡಲು ನಾವು ಯಾರನ್ನು ಕೇಳಿ ಮಾಡಬೇಕಾಗಿಲ್ಲ , ಬ್ರಹ್ಮ ಶ್ರೀಗಳು ಒಂದು ಜಾತಿಗೆ ಸೀಮಿತರಾದವರಲ್ಲ ಅವರು ಸಮಸ್ತ ಭಾರತದ ಮಾನವ ಕುಲಕ್ಕೆ ಸೇರಿದವರು ಆದರೆ ಯಾರನ್ನು ಕೇಳಿಕೊಂಡು ಅವರ ಜಯಂತಿ ಮಾಡುವ ಅಗತ್ಯ ಇಲ್ಲ .ಅವರ ಸ್ವಾರ್ಥಕ್ಕೋಸ್ಕರ ಅವರ ರಾಜ್ಯಕ್ಕೋಸ್ಕರ ಜಯಂತಿ ಮಾಡಲಿ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುರು ಬೆಳದಿಂಗಳು ಸೇವಾ ಸಂಸ್ಥೆ ಅಧ್ಯಕ್ಷರ ಪದ್ಮರಾಜ್ ಅವರು ನೀಡಿದ ಹೇಳಿಕೆ ಪದ್ಮರಾಜ್ ಅವರ ಹೆಸರು ಎತ್ತದೆ ಮಾತನಾಡಿ ಈ ವ್ಯಕ್ತಿ ಗೂ ನಮಗೂ ಸಂಬಂಧವಿಲ್ಲ .ಇವರ ನಾರಾಯಣ ಗುರುಗಳು ಯಾರು ಎಂದು ಕೂಡ ನಮಗೆ ತಿಳಿದಿಲ್ಲ ,ಒಂದೇ ಜಾತಿ ಒಂದೇ ದೇವರೆಂದು ಹೇಳಿದ ನಾರಾಯಣಗುರು ಯಾವ ಒಂದು ಜಾತಿಯ ಗೋಡೆ ಇಲ್ಲ.
ಹಿಂದೆ ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತ ನಾರಾಯಣಗುರುಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಈ ಬಾರಿ ದಕ್ಷಿಣ ಜಿಲ್ಲೆಯ ಆಡಳಿತಕ್ಕೆ ಸಿಎಂ ಆದೇಶದಂತೆ ಅವರ ಜನ್ಮದಿನವನ್ನು ಸಮಸ್ತ ನಾಗರಿಕರ ಸಮ್ಮುಖದಲ್ಲಿ ಮಾಡಬೇಕೆಂದು ಆದೇಶ ಬಂದ ಕಾರಣ ಅದ್ದೂರಿಯಾಗಿ ಆಚರಿಸಲು ತೀರ್ಮಾ ನಿಸಿದ್ದೇವೆ. ಅವರು ಜಾತಿಗೆ ಸೀಮಿತವಾದ ದಾರ್ಶನಿಕರೇ ಅಲ್ಲ ನಮಗೆ ಯಾರಲ್ಲೂ ಕೇಳಿ ಮಾಡುವ ಅಗತ್ಯವಿಲ್ಲ ಇನ್ನೊಬ್ಬರ ಟೀಕೆ ನಮಗೆ ನಗಣ್ಯ. ನಾವು ವಿವಾದ ಮಾಡುವುದಿಲ್ಲ ಕಳೆದ ಬಾರಿ ಗಣರಾಜ್ಯೋತ್ಸವ ಪಠ್ಯಪುಸ್ತಕದಲ್ಲೂ ವಿನಾಕಾರಣ ವಿವಾದ ಎಬ್ಬಿಸಿದರು ಅಲ್ಲಿ ಕಾಂಗ್ರೆಸಿಗರು ಇದ್ದರೆ ವಿನಾ ನಾರಾಯಣಗುರು ಅನುಯಾಯಿಗಳು ಇರಲಿಲ್ಲ ಅವರು ಪ್ರತಿಭಟನೆ ಮಾಡುವವರು ಅಲ್ಲ.
ಈಗ ಬೇರೆ ವಿಚಾರ ಸಿಗದಿರುವುದಕ್ಕೆ ಜನ್ಮ ಜಯಂತಿ ವಿಚಾರದಲ್ಲಿ ವಿವಾದ ಎಬ್ಬಿಸಿದ್ದಾರೆ ಅವರು ಯಾರ ಆಸ್ತಿಯೂ ಅಲ್ಲ ವಿವಾದ ನಮಗೆ ಲೆಕ್ಕಕ್ಕೆ ಇಲ್ಲ .ಇವರ ಆಚರಣೆಗೆ ಸರಕಾರ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದೆ. ಮುಂದೆ ಬೇರೆ ಬೇರೆ ಜಿಲ್ಲೆಯಲ್ಲಿ ನಾರಾಯಣಗುರುಗಳ ಜನ್ಮದಿನೋತ್ಸವ ಆಗುವ ಸೂಚನೆ ಇದೆ ಅದರಂತೆ ಮಾಡುತ್ತೇವೆ ಎಂದು ಹೇಳಿದರು.
ಅದೇನೇ ಆದರೂ ರಾಜ್ಯಮಟ್ಟದಲ್ಲಿ ಸೆಪ್ಟಂಬರ್ 10ರಂದು ನಾರಾಯಣಗುರು ಜಯಂತಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣ ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.