ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪತ್ರಿಕಾ ಭವನದಲ್ಲಿ ನ.16 ರಂದು ಪೂರ್ವಾಹ್ನ11.30 ಗಂಟೆಗೆ ನಡೆಯಲಿದೆ.
ದ.ಕ ಜಿಲ್ಲಾ ಧಿಕಾರಿ ರವಿಕುಮಾರ್ ಎಂ.ಆರ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಸಹ್ಯಾದ್ರಿ ಇಂಜಿನಿಯ ರಿಂಗ್ ಕಾಲೇಜಿನ ಪ್ರೊಫೆಸರ್ ಡಾ.ಅನಂತ ಪ್ರಭು ಡಿಜಿಟಲ್ ತಂತ್ರಜ್ಞಾನ ದಲ್ಲಿ ಸುರಕ್ಷಾ ವಿಧಾನ ಗಳ (ಸುರಕ್ಷತಾ ಸಾಧನಗಳು) ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.