ಬೆಳ್ತಂಗಡಿ: ಶ್ರೀಕ್ಷೇತ್ರ ಧ.ಗ್ರಾ.ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಅಳದಂಗಡಿ ಘಟಕದ ಸ್ವಯಂಸೇವಕರು ಬರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಶ್ರಮಸೇವೆಯ ಮೂಲಕ ಅಡಕೆ ಗಿಡಗಳ ನಾಟಿ ಮಾಡಿದರು.
ದೇವಸ್ಥಾನದ ಆಡಳಿತ ಮಂಡಳಿಯ ಮನವಿಯ ಮೇರೆಗೆ ಮಾನ್ಯ ಯೋಜನಾಧಿಕಾರಿಗಳ ಒಪ್ಪಿಗೆಯನ್ನು ಪಡೆದು 450 ಅಡಿಕೆ ಗಿಡಗಳನ್ನು ನಾಟಿ ಮಾಡಿಕೊಡಲಾಯಿತು.
ದೇವಳದ ಅರ್ಚಕ ಭಾರ್ಗವರವರು ದೇವತಾ ಪ್ರಾರ್ಥನೆಯ ಮೂಲಕ ಗಿಡನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜಯವಂತ ಪಟಗಾರರ ಉಪಸ್ಥಿತಿಯಲ್ಲಿ ಗುರುವಾಯನಕೆರೆ ಯೋಜನಾಧಿಕಾರಿಗಳಾದ ಯಶವಂತ್ ಅವರ ಮಾರ್ಗದರ್ಶನದಲ್ಲಿ ಸುಮಾರು 30 ಮಂದಿ ಗಿಡ ನಾಟಿ ಮಾಡಿದರು.
ಗುರುವಾಯನಕೆರೆ ಯೋಜನಾಧಿಕಾರಿಗಳಾದ ಯಶವಂತ್ ಅವರು ಹೊಸತಾಗಿ ಸೇರ್ಪಡೆಗೊಂಡ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಿಸಿದರು.
ದೇವಸ್ಥಾನದ ಆಡಳಿತೆದಾರ ಸದಾನಂದ ಸಹಸ್ರಬುದ್ಯೆ ಹಾಗೂ ಊರಿನ ನಾಗರಿಕರು ಪಿಲ್ಯ ಒಕ್ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಲಯ ಮೇಲ್ವಿಚಾರಕಿ ಸುಮಂಗಲ ಹಾಗೂ ಪಿಲ್ಯ ಒಕ್ಕೂಟದ ಸೇವಾ ಪ್ರತಿನಿಧಿ ಹರಿಣಾಕ್ಷಿ ಉಪಸ್ಥಿತರಿದ್ದರು. ಅಳದಂಗಡಿ ವಲಯ ಘಟಕ ಶ್ರೀಕಾಂತ ಪಟವರ್ಧನ್ ಸ್ವಾಗತಿಸಿದರು.