News Karnataka Kannada
Wednesday, May 08 2024
ಮಂಗಳೂರು

ಮಂಗಳೂರು: ಜನಸಾಮಾನ್ಯರನ್ನು ತಾಸುಗಟ್ಟಲೆ ಕಾಯಿಸಿದ ಪಾಲಿಕೆ ಕಮಿಷನರ್, ಸಾರ್ವಜನಿಕರಿಂದ ತರಾಟೆ

Mangaluru: McC Commissioner makes common people wait for hours
Photo Credit : News Kannada

ಮಂಗಳೂರು: ಸಾರ್ವಜನಿಕರ ಭೇಟಿಯ ನಿಗದಿತ ಸಮಯದಲ್ಲಿ ಜನಸಾಮಾನ್ಯರನ್ನು ತಾಸುಗಟ್ಟಲೆ ಕಾಯಿಸಿದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಚೆನ್ನಬಸಪ್ಪ ಅವರನ್ನು ಕಮ್ಯುನಿಸ್ಟ್ ಮುಖಂಡ ಸುನೀಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ನಾಗರಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಪಾಲಿಕೆ ಆಯುಕ್ತ ಚೆನ್ನಬಸಪ್ಪ ಅವರು ಸಾರ್ವಜನಿಕರ ಭೇಟಿಗೆ ನಿಗದಿಪಡಿಸಿದ್ದ ಸಮಯದಲ್ಲಿ ತನ್ನ ಚೇಂಬರ್ ನಲ್ಲಿ ಹಾಜರಿರಲಿಲ್ಲ. ಅವರನ್ನು ಭೇಟಿಯಾಗಲು ಸಾರ್ವಜನಿಕರು ಕಾಯುತ್ತಿದ್ದರು. ಆಯುಕ್ತರು ಮೀಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಯಿತು. ಹೀಗೆ ತಾಸುಗಟ್ಟಲೆ ಜನಸಾಮಾನ್ಯರನ್ನು ಪಾಲಿಕೆಯ ಕಮಿಷನರ್ ಚೇಂಬರ್ ಬಳಿ ಕಾಯಿಸಲಾಯಿತು. ಕಮಿಷನರ್ ಮೀಟಿಂಗ್ ಹೆಸರಿನಲ್ಲಿ ಕಾಲಹರಣ ಮಾಡುತ್ತಿರುವುದಾಗಿ ಸುನಿಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ತಡವಾಗಿ ಬಂದ ಕಮಿಷನರ್ ವರ್ತನೆಯ ಬಗ್ಗೆ ಸುನಿಲ್ ಕುಮಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಾರ್ವಜನಿಕರ ಭೇಟಿಗೆ ನಿಗದಿಪಡಿಸಿದ ವೇಳೆಯಲ್ಲಿ ನೀವು ಮೀಟಿಂಗ್ ಹೆಸರಿನಲ್ಲಿ ಜನಸಾಮಾನ್ಯರನ್ನು ಕಾಯಿಸುವುದು ಸರಿಯಲ್ಲ ಎಂದು ಸುನೀ ಲ್ ಅವರು ಏರುಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಆಯುಕ್ತರು ಇದಕ್ಕೆ ಹಾಗಲ್ಲ, ಹೀಗೆ ಎಂದೆಲ್ಲ ಸಮಜಾಯಿಷಿ ನೀಡಲಾರಂಭಿಸಿದರು. ಕೊನೆಗೆ ಕಮಿಷನರ್ ಅವರು ನಾನು ಸಿನಿಮಾ ನೋಡಲು ಹೋಗಿಲ್ಲ ಎಂದು ಹೇಳಿದರು. ಆದರೆ, ಸುನೀಲ್ ಕುಮಾರ್ ಅವರು ಪಟ್ಟುಬಿಡದಾಗ ಕೊನೆಗೆ ಕಮಿಷನರ್ ಚನ್ನಬಸಪ್ಪ ಅವರು ಸುನೀಲ್ ಅವರ ಹೆಗಲಿಗೆ ಕೈಹಾಕಿ ಸಮಾಧಾನಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು