ಮಂಗಳೂರು: ಹಿಂದೂ ಜಾಗರಣ ವೇದಿಕೆ ಶಕ್ತಿನಗರ ಇದರ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಗೆ ಅಮ್ಮ ನಡೆ ನಮ್ಮ ನಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮ ಶಕ್ತಿನಗರ ಬಳಿ ಇರುವ ವೈದ್ಯನಾಥ ದೈವ ಸ್ಥಾನದಿಂದ ಬೆಳಿಗ್ಗೆ 5:00ಗೆ ಸರಿಯಾಗಿ ಪ್ರಾರಂಭಗೊಂಡು ನಡೆದ ಈ ಪಾದಯಾತ್ರೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಂತ್ಯಗೊಂಡಿತು.
ಸಾವಿರಾರು ಜನ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವೈದ್ಯನಾಥ ದೈವ ಸ್ಥಾನದಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.
ಈ ಕಾಲ್ನಡಿಗೆ ಜಾತಕ್ಕೆ ಮುಖ್ಯ ಅತಿಥಿಗಳಾಗಿ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವಾಸ್ ಕಾಮತ್, ಉದ್ಯಮಿ ಕೆ ಸಿ ನಾಯಕ್ ಎಚ್ ಪಿ ಮುಖಂಡ ಶರಣ್ ಪಂಪವೆಲ್ಲ್ , ಪುರುಷೋತ್ತಮ್ ಜೋಗಿ, ಸ್ಥಳೀಯ ಕಾರ್ಪೊರೇಟರ್ ಆದ ಕಿಶೋರ್ ಕೊಟ್ಟಾರೆ , ಶಕೀಲಾ ಕಾವಾ ಸಹಿತ ಹಿಂದೂ ಜಾಗರಣ ವೇದಿಕೆಯ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸಿದ್ಧರಿದ್ದರು.
ಕಾರ್ಯಕ್ರಮವನ್ನು ಶಾಸಕರಾದ ಭೇದವಾಸ್ ಕಾಮತ ತೆಂಗಿನಕಾಯಿ ಒಡೆಯುವ ಮೂಲಕ ಕಾಲ್ನಡಿಗೆ ಜಾತಕ್ಕೆ ಚಾಲನೆ ನೀಡಿದರು. ಶಾಸಕರಾದ ವೇದವಾಸ್ ಕಾಮತ್ , ಉದ್ಯಮಿ ಕೆ ಸಿ ನಾಯಕ್ ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.