ಮಡಿಕೇರಿ: ಕೊಡಗು ಜಿಲ್ಲಾ ಕಿವುಡರ ಸಂಘದ ಮಹಾಸಭೆಯು ವಿರಾಜಪೇಟೆಯ ಪುರಸಭೆಯ ಸಭಾಂಗಣದಲ್ಲಿ ಡಿಸೆಂಬರ್ 18 ರಂದು ಜರುಗಿತು.
ಇದೇ ಸಂದರ್ಭ ಆಡಳಿತ ಮಂಡಳಿಯ ಪುನರ್ ರಚನೆಯ ಸಭೆಯ ಅಧ್ಯಕ್ಷತೆಯನ್ನು ಜೋಸೆಫ್ ಶಾಮ್, ವಹಿಸಿದ್ದರು. ಅತಿಥಿಗಳಾಗಿ, ಉಪಾಧ್ಯಕ್ಷರಾದ ಗೌರವ್ ಸೋಮಣ್ಣ ಆಗಮಿಸಿದ್ದರು, ನೂತನ ಸಾಲಿನ ಅಧ್ಯಕ್ಷರಾಗಿ ಹೆಚ್. ಜಿ ದಿವ್ಯ, ಉಪಾಧ್ಯಕ್ಷರಾಗಿ ಕೆ ಕೆ ಶಂಕರ್, ಪ್ರಧಾನ ಕಾರ್ಯದರ್ಶಿಗಳಾಗಿ ನಾಗೇಶ, ಜಂಟಿ ಕಾರ್ಯದರ್ಶಿಯಾಗಿ ರಮ್ಷದ್, ಖಜಂಗಿಯಾಗಿ ಸುರೇಶ್, ನಿರ್ದೇಶಕರಾಗಿ ವೆಂಕಟೇಶ್, ಗಣೇಶ್, ಅಸ್ಲಾಂ, ಛಾಯಾ, ಸುನಿಲ್, ಪ್ರಭಾಕರ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳು ನಡೆಸುವ ಮೂಲಕ ಸರ್ಕಾರದ ಸೌಲಭ್ಯಕ್ಕಾಗಿ ಸಂಬಂಧಿಸಿದವರನ್ನು ಭೇಟಿಯಾಗಿ, ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ಸಂಘ ಹಮ್ಮಿಕೊಳ್ಳಲಿದೆ, ಎಲ್ಲರ ಸಹಕಾರ ಅತ್ಯಗತ್ಯ ಎಂದು ಸಂಘದ ದೂತನ ಅಧ್ಯಕ್ಷರು ಸಭೆಯನ್ನುದೇಶಿಸಿ ಮಾತನಾಡಿದರು