ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮೂರು ಹೆಚ್ಚುವರಿ ಸ್ವಯಂಚಾಲಿತ ಟಿಕೆಟ್ ವಿತರಣೆ ಯಂತ್ರ ಒದಗಿಸಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ರೈಲ್ವೇ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿತಿಳಿಸಿದ್ದಾರೆ.
ಅವರು ದಕ್ಷಿಣ ರೈಲ್ವೇ ವಿಭಾಗೀಯ ರೈಲ್ವೇ , ಪ್ರಸ್ತುತ ಒಂದು ಟಿಕೆಟ್ ವಿತರಣೆ ಯಂತ್ರ ಮಾತ್ರ ಲಭ್ಯವಿದೆ, ಈ ವರ್ಷದ ಮಾರ್ಚ್ನಲ್ಲಿ ಹೆಚ್ಚುವರಿ ಯಂತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮಂಗಳೂರು ಸೆಂಟ್ರಲ್ ಹಾಗೂ ವೈಷ್ಟೋದೇವಿ ಕಾಟ್ರಾ ಮಧ್ಯೆ ನವಯುಗ ಎಕ್ಸ್ಪ್ರೆಸ್ ರೈಲನ್ನು ಮತ್ತೆ ಆರಂಭಿಸುವ ಪ್ರಸ್ತಾವ ರೈಲ್ವೇ ಮಂಡಳಿಯಲ್ಲಿದ್ದು, ಶೀಘ್ರ ಅನುಮೋದನೆ ಲಭಿಸುವ ನಿರೀಕ್ಷೆ ಇದೆ. ಮಂಗಳೂರು-ಮೀರಜ್ ಮಧ್ಯೆ ಮೀಟರ್ ಗೇಜ್ನಿಂದ ಬ್ರಾಡ್ಗೆಜ್ ಆಗುವಾಗ ಸ್ಥಗಿತಗೊಂಡಿದ್ದ ಬಹು ಬೇಡಿಕೆಯ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ಕೂಡ ಮಂಡಳಿಯ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ನಂ.12133/34 ಸಿಎಸ್ಎಂಟಿ ಮುಂಬಯಿ -ಮಂಗಳೂರು ಜಂಕ್ಷನ್ ಸೂಪರ್ಫಾಸ್ಟ್ ಎಕ್ಸ್ ಪ್ರೆಸ್, 16575/76 ಯಶವಂತಪುರ ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ 9 / ಎಕ್ಸ್ಪ್ರೆಸ್ ಹಾಗೂ ನಂ.07377/78 ವಿಜಯಪುರ -ಮಂಗಳೂರು ಜಂಕ್ಷನ್ ರೈಲುಗಳನ್ನು ಸೆಂಟ್ರಲ್ಗೆ ವಿಸ್ತರಣೆ ಮಾಡಬೇಕೆಂಬ ಬಹಳ ಹಳೆಯ ಬೇಡಿಕೆಯನ್ನು ಸೆಂಟ್ರಲ್ನಲ್ಲಿ ಹೆಚ್ಚುವರಿ ಪ್ಲಾಟ್ಫಾರಂ ಪೂರ್ಣವಾದ ಬಳಿಕ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.
ಸಂಜೆ ಮಡಗಾಂವ್ ಕಡೆಗೆ ರೈಲುಗಳಿಲ್ಲದ ಕಾರಣ ನಂ.10108 ಮಂಗಳೂರು ಸೆಂಟ್ರಲ್ ಮಡಗಾಂವ್ ಮೆಮು ರೈಲನ್ನು ಅಪರಾಹ್ನ 2.45ರ ಬದಲಿಗೆ 4.30ಕ್ಕೆ ಆರಂಭಿಸಬೇಕು ಎಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಇದನ್ನು ಮಂಗಳೂರು ಸೆಂಟ್ರಲ್ನಲ್ಲಿ ಹೆಚ್ಚುವರಿ ಪ್ಲಾಟ್ಫಾರಂ ನಿರ್ಮಾಣದ ಬಳಿಕ ಹಾಗೂ ಕೊಂಕಣದಲ್ಲಿ ಹೆಚ್ಚುವರಿ ಮಾರ್ಗ ಲಭ್ಯವಾದ ಬಳಿಕ ಪರಿಗಣಿಸಬಹುದು. ಅಲ್ಲದೆ ಇದಕ್ಕೆ ಅನುಕೂಲವಾಗುವಂತೆ ನಂ. 06488 ಸುಬ್ರಹ್ಮಣ್ಯ ರೋಡ್ -ಮಂಗಳೂರು ರೈಲನ್ನು ತಡವಾಗಿ ಬಿಡುವಂತೆ ನೈಋತ್ಯ ರೈಲ್ವೆಯನ್ನು ಕೋರಿಕೊಳ್ಳಲಾಗುವುದು ಎಂದರು.