ಮಂಗಳೂರು: ಜುವೆಲ್ಸ್ ಗ್ರೂಪ್ ಸಹಭಾಗಿತ್ವದಲ್ಲಿ ಎಸ್ಎಸ್ವಿಪಿ ಆಂಡ್ ಹೆಲ್ತ್ ಕಮಿಷನ್ ರೊಷಾರಿಯೊ, ಸೈಂಟ್ ಲಾರೆನ್ಸ್ ಚರ್ಚ್ ಬೋಂದೆಲ್, ಎಸ್ಎಸ್ವಿಪಿ ಯೂತ್ ಆಂಡ್ ಪೇರೆಂಟ್ ಕಾನ್ಫರೆನ್ಸಸ್ ಬಜಪೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕೆಎಂಸಿ ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ, ಎಜೆ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ಜಾಗೃತಿ ಶಿಬಿರ ಮಂಗಳೂರಿನ ಬೋಂದೆಲ್ ಸೈಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಸೈಂಟ್ ಲಾರೆನ್ಸ್ ಚರ್ಚ್ನ ಧರ್ಮಗುರು ಫಾ. ಆಂಡ್ರೂಲಿಯೊ ಡಿಸೋಜ ದೀಪಬೆಳಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಜನರಲ್ಲಿ ಕ್ಯಾನ್ಸರ್ ಎಂದಾಕ್ಷಣ ಭಯ ಪಡುವಂತಹ ಪರಿಸ್ಥಿತಿ ಎದುರಾಗಿದೆ ಇದನ್ನು ದೂರ ಮಾಡಿ ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮತ್ತು ಉಚಿತ ತಪಾಸಣೆಯ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ದಿ ಜುವೆಲ್ಸ್ ಗ್ರೂಪ್ ಮಾಡ್ತಾ ಇದೆ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಜೆ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ರೇಡಿಯೆಷನ್ ಓನ್ಕಾಲಜಿ ವಿಭಾಗದ ಪ್ರೊಫೆಸರ್ ಡಾ. ಕಮಲಾಕ್ಷ ಶೆಣೈ, ಎ.ಜೆ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನ ಕನ್ಸಲ್ಟೆಂಟ್ ರೇಡಿಯೆಷನ್ ಓನ್ಕಾಲಜಿ ಡಾ. ಕವಿತಾ, ಎಸ್ಎಸ್ವಿಪಿ ಆಂಡ್ ಹೆಲ್ತ್ ಕಮಿಷನ್ ರೊಷಾರಿಯೊ ಇದ್ರ ಸಂಚಾಲಕ ಜನರಿಸ್ ಮಿನೇಜಸ್, ಜುವೆಲ್ ಗ್ರೂಪ್ ಬೊನವಿಂಚರ್ ಡಿಸೋಜ, ಚರ್ಚ್ ನ ಪಾಲನ ಮಂಡಳಿ ಕಾರ್ಯದರ್ಶಿ ಸ್ಟೀವನ್ ನೊರೊನ್ಹಾ, ಮತ್ತಿತರರು ಉಪಸ್ಥಿತರಿದ್ದರು.