ಮಂಗಳೂರು: ವಿಧಾನ ಪರಿಷತ್ ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜರವರ ಮುಂದಾಳತ್ವದಲ್ಲಿ, ಅಗೋಸ್ಟ್ 23ರಂದು ಮಂಗಳವಾರ ಬೆಳಿಗ್ಗೆ 10.30ರಿಂದ ಸಂಜೆ 4.00ಗಂಟೆಯವರೆಗೆ ಮಂಗಳೂರು ಸ್ಟೋರ್ಸ್ ಸಭಾಭವನದಲ್ಲಿ 203 ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಾರ್ಡ್ಗಳಾದ ಅತ್ತಾವರ, ಫಳ್ನೀರ್, ಜಪ್ಪು, ಮಂಗಳಾದೇವಿ ಮತ್ತು ಬೋಳಾರ ಪರಿಸರದಲ್ಲಿರುವ ಮತದಾರರ ಸೇರ್ಪಡೆ, ಮತದಾರರ ಗುರುತುಚೀಟಿಗೆ ಆಧಾರ್ ಲಿಂಕ್ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದರ ಉದ್ಘಾಟನೆಯನ್ನ್ನು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಲೀಂ ಇವರು ನೆರವೇರಿಸಲಿರುವರು. ಸಮಾರಂಭದಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ವಾರ್ಡಿನ ಅಧ್ಯಕ್ಷರು ಮತ್ತು ಬೂತ್ ಅಧ್ಯಕ್ಷರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಮನೆಯಲ್ಲಿಯೇ ಇದ್ದು ಲಿಂಕ್ ಮಾಡುವ ವಿಧಾನದ ಬಗ್ಗೆ ಕಾರ್ಯಕ್ರಮದಲ್ಲಿ ವಿವರಣೆಗಳನ್ನು ನೀಡಲಾಗುವುದು.
ಶಿಬಿರದಲ್ಲಿ ಭಾಗವಹಿಸಿ ಹೊಸ ಮತದಾರರ ಸೇರ್ಪಡೆ ಮತ್ತು ಆಧಾರ್ ಅಥವಾ ಇನ್ನಿತರ 11 ದಾಖಲೆಗಳಿಗೆ ಲಿಂಕ್ ಮಾಡುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಐವನ್ ಡಿ ಸೋಜರವರು ಮತದಾರರಲ್ಲಿ ವಿನಂತಿಸಿದ್ದಾರೆ.