ಮಂಗಳೂರು: ಚುನಾವಣಾ ರಣಕಣ ರಂಗೇರಿದ್ದು, ಪ್ರತಿ ಅಭ್ಯರ್ಥಿಗಳ ಮೇಲೆ ಪರ ವಿರೋಧ ಬೆಟ್ಟಿಂಗ್ ಹವಾ ಜೋರಾಗಿದೆ. ಅದೇ ರೀತಿ ಕೆಲ ಅಭ್ಯರ್ಥಿಗಳ ಜನರು ಪ್ರಚಾರದ ವೇಳೆ ಪ್ರೀತಿ ತೋರುತ್ತಿರುವುದನ್ನು ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಬೈಂದೂರು ಬಿಜೆಪಿ ಅಭ್ಯರ್ಥಿ ಬರಿಗಾಲ ಸಂತ ಎಂದೆ ಹೆಸರು ಪಡೆದಿರುವ ಗುರುರಾಜ್ ಗಂಟಿಹೊಳೆ ಪರ ಬೆಂಗಳೂರಿನ ಹೋಟೆಲ್ ಮಾಲೀಕರೊಬ್ಬರು ಹೋಟೆಲ್ ಬಿಲ್ನಲ್ಲಿ ಸ್ಲೋಗನ್ ಪ್ರಕಟಿಸಿರುವ ವಿಚಾರ ವೈರಲ್ ಆಗಿದೆ.
ಬೆಂಗಳೂರಿನ ಯಲಹಂಕ ನ್ಯೂಟೌನ್ನಲ್ಲಿರುವ ನ್ಯೂ ಉಡುಪಿ ವೆಜ್ ಹೋಟೆಲ್ನವರು ಬಿಲ್ನಲ್ಲಿ ಈ ಬಾರಿ ಗುರುರಾಜ ಗಂಟಿ ಹೊಳೆ ಜೈ ಬಿಜೆಪಿ ಎಂದು ಅಚ್ಚೊತ್ತಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.