News Karnataka Kannada
Monday, May 06 2024
ಮಂಗಳೂರು

ಎಂಸಿಸಿ ಬ್ಯಾಂಕ್ ಸುರತ್ಕಲ್ ಶಾಖೆಯ ಹೊಸ ಆವರಣದ ಉದ್ಘಾಟನೆ ಮತ್ತು ರಜತ ಮಹೋತ್ಸವ ಆಚರಣೆ

Bank
Photo Credit : News Kannada

ಮಂಗಳೂರು: ಬ್ಯಾಂಕ್‍ನ ಗೌರವಾನ್ವಿತ ಗ್ರಾಹಕರ ಅನುಕೂಲಕ್ಕಾಗಿ, ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್‍ನ ಸುರತ್ಕಲ್ ಶಾಖೆಯನ್ನು 26.01.2024ರಂದು ಲ್ಯಾಂಡ್ ಲಿಂಕ್ಸ್ ಪರ್ಲ್, ಸರ್ವಿಸ್ ರಸ್ತೆ, ಸುರತ್ಕಲ್, ಮಂಗಳೂರಿನ ನೆಲ ಮಹಡಿಯಲ್ಲಿರುವ ಸಂಪೂರ್ಣ ಹವಾನಿಯಂತ್ರಿತ ಆವರಣಕ್ಕೆ ಸ್ಥಳಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಿಸಲಾಯಿತು.

ಸುರತ್ಕಲ್ ಶಾಖೆಯ ನೂತನ ಆವರಣವನ್ನು ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ಸುರತ್ಕಲ್‍ನ ಸೇಕ್ರೆಡ್ ಹಾರ್ಟ್ ಚರ್ಚ್‍ನ ಧರ್ಮಗುರುಗಳಾದ ರೆ| ಫಾ| ಆಸ್ಟಿನ್ ಪೀಟರ್ ಪೆರಿಸ್ ಅವರು ನೂತನ ಆವರಣವನ್ನು ಆಶೀರ್ವಚಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಮಂಗಳೂರು ಇದರ ಮಾಜಿ ಜನರಲ್ ಮ್ಯಾನೇಜರ್ ಶ್ರೀ ಜೋಸೆಫ್ ಕ್ವಾಡ್ರಸ್ ಮತ್ತು ಗೌರವಾನ್ವಿತ ಅತಿಥಿಯಾಗಿ ಉದ್ಯಮಿ ಶ್ರೀ ರಾಜೇಶ್ ಶೆಟ್ಟಿಗಾರ್ ಹಾಜರಿದ್ದರು. ಸೇಫ್ ರೂಮನ್ನು ಮುಖ್ಯ ಅತಿಥಿಗಳಾದ ಶ್ರೀ ಜೋಸೆಫ್ ಕ್ವಾಡ್ರಸ್ ಉದ್ಘಾಟಿಸಿದರು. ಗೌರವ ಅತಿಥಿಗಳಾದ ಶ್ರೀ ರಾಜೇಶ್ ಶೆಟ್ಟಿಗಾರ್ ಇ-ಸ್ಟ್ಯಾಂಪ್ ಸೌಲಭ್ಯವನ್ನು ಉದ್ಘಾಟಿಸಿದರು. ಉದ್ಘಾಟನಾ ಮತ್ತು ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ವಹಿಸಿದ್ದರು.

ಬ್ಯಾಂಕ್‍ನ ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶಾಖೆಯನ್ನು ನೆಲಮಹಡಿಯಲ್ಲಿ ಹೆಚ್ಚು ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಕಳೆದ ವರ್ಷ ನಡೆದ ಗ್ರಾಹಕರ ಸಭೆಯಲ್ಲಿ ಆಡಳಿತ ಮಂಡಳಿ ನೀಡಿದ ಭರವಸೆಯನ್ನು ಸಭೆಗೆ ತಿಳಿಸಿದರು.

ಪಾರ್ಕಿಂಗ್ ಸೌಲಭ್ಯ ಪೂರೈಸಲಾಗಿದ್ದು, ಸದ್ಯ ಎಂ.ಸಿ.ಸಿ ಬ್ಯಾಂಕ್‍ನಲ್ಲಿ ಲಭ್ಯವಿರುವ ಎಲ್ಲಾ ಬ್ಯಾಂಕಿಂಗ್ ಸೇವೆಗಳು – ರಾಷ್ಟ್ರೀಕೃತ ಮತ್ತು ಇತರ ವಾಣಿಜ್ಯ ಬ್ಯಾಂಕ್‍ಗಳಿಗೆ ಸಮಾನವಾಗಿದ್ದು, ಗ್ರಾಹಕರ ಅಗತ್ಯತೆ ಮತ್ತು ಆಶೋತ್ತರಗಳಿಗೆ ಬ್ಯಾಂಕ್ ಸ್ಪಂದಿಸುತ್ತಿದೆ. ಗ್ರಾಹಕರ ಬ್ಯಾಂಕಿಂಗ್ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಹೆಚ್ಚು ಗ್ರಾಹಕ ಕೇಂದ್ರಿತವಾಗಿರಲು ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ ಮತ್ತು ಬ್ಯಾಂಕ್‍ನೊಂದಿಗೆ ನಿಧಿಯ ಸುರಕ್ಷತೆಗಾಗಿ ಠೇವಣಿಗಳನ್ನು ಡಿಐಜಿಸಿಸಿ ವಿಮೆ ಮಾಡಲಾಗಿದೆ. 112 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಬ್ಯಾಂಕನ್ನು ಬೆಂಬಲಿಸಿ ಬ್ಯಾಂಕ್‍ನ ಪ್ರಗತಿಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಸಹಕರಿಸುವಂತೆ ಗ್ರಾಹಕರಿಗೆ ಕರೆ ನೀಡಿದರು.

ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿಯವರು ತೋರಿದ ಬೆಂಬಲ ಮತ್ತು ವಿಶ್ವಾಸ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮದಿಂದ ತಾವು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾಗಲು ಸಹಕಾರಿಯಾಗಿದೆ ಹಾಗೂ ಬ್ಯಾಂಕ್‍ನ 1000 ಕೋಟಿ ವ್ಯವಹಾರ ವಹಿವಾಟಿನ ಮೈಲಿಗಲ್ಲು ಸಾಧನೆ ಮತ್ತು ಈ ಸಂದರ್ಭದಲ್ಲಿ ಪರಿಚಯಿಸಲಾದ ಕೊಡುಗೆಗಳ ಕುರಿತು ಅವರು ಸಭೆಗೆ ತಿಳಿಸಿದರು.

ನೂತನ ಆವರಣವನ್ನು ಆಶೀರ್ವದಿಸಿದ ರೆ| ಫಾ| ಆಸ್ಟಿನ್ ಪೀಟರ್ ಪೆರಿಸ್ ಅವರು ಶಾಖೆಯನ್ನು ಹೆಚ್ಚಿನ ಅನುಕೂಲಕ್ಕಾಗಿ ಸ್ಥಳಾಂತರಣೆ ಮತ್ತು ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಣೆಯ ಸಂದರ್ಭದಲ್ಲಿ ಅಭಿನಂದಿಸಿದರು. ಬ್ಯಾಂಕಿನ ಸುಧಾರಣೆಗಾಗಿ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾರಿಗೊಳಿಸುವ ಮೂಲಕ ಬ್ಯಾಂಕ್ ಸ್ಥಿರ ಗತಿಯಲ್ಲಿ ಸಾಗಬೇಕೆಂದು ಅವರು ಕರೆ ನೀಡಿದರು. ಶ್ರೀ ಜೋಸೆಫ್ ಕ್ವಾಡ್ರಸ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಬ್ಯಾಂಕಿನ ಬೆಳವಣಿಗೆಯಲ್ಲಿ ಅಧ್ಯಕ್ಷರ ದೂರದೃಷ್ಟಿ ಮತ್ತು ನಾಯಕತ್ವವನ್ನು ಅವರು ಶ್ಲಾಘಿಸಿದರು. ಕಳೆದ 5 ವರ್ಷಗಳಲ್ಲಿ ದ್ವಿಗುಣಗೊಂಡಿರುವ ಬ್ಯಾಂಕಿನ ಹಣಕಾಸು ವಿವರಗಳನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಶಾಖೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಜೊತೆಗಿದ್ದ 25 ಗ್ರಾಹಕರನ್ನು ಬೆಳ್ಳಿಹಬ್ಬದ ಗ್ರಾಹಕರು ಎಂದು ಪರಿಗಣಿಸಿದರು. ಶಾಖೆಯ ಪ್ರಥಮ ವ್ಯವಸ್ಥಾಪಕರಾಗಿದ್ದ ಶ್ರೀ ಲೆಸ್ಲಿ ಪಾಯ್ಸ್ ಮತ್ತು ಹಿಂದಿನ ಆವರಣದ ಮ್ಹಾಲಕರಾದ ಶ್ರೀ ವಿಜಯ್ ಕುಮಾರ್ ಇಡ್ಯ ಮತ್ತು ಶ್ರೀ ಉದಯ ಶಂಕರ್ ರಾವ್ ಹಾಗೂ ನೂತನ ಆವರಣದ ಮ್ಹಾಲಕರಾದ ಶ್ರೀ ಕೇಶವ ಸಾಲಿಯಾನ್ ಮತ್ತು ಸಿವಿಲ್ ಇಂಜಿನಿಯರ್ ಶ್ರೀ ಕಾರ್ತಿಕ್ ಕಿರಣ್ ಇವರನ್ನು ಗೌರವಿಸಲಾಯಿತು.

ಅಧ್ಯಕ್ಷರು ಮುಖ್ಯ ಅತಿಥಿಗಳು ಮತ್ತು ಗೌರವಾನ್ವಿತ ಅತಿಥಿಗಳನ್ನು ಕೃತಜ್ಞತೆಯ ಸಂಕೇತವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ನಿರ್ದೇಶಕರಾದ ಡಾ ಜೆರಾಲ್ಡ್ ಪಿಂಟೊ, ಹೆರಾಲ್ಡ್ ಜಾನ್ ಮೊಂತೇರೊ, ಡೇವಿಡ್ ಡಿಸೋಜಾ, ಮೆಲ್ವಿನ್ ಅಕ್ವಿನಾಸ್ ವಾಸ್, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಐರಿನ್ ರೆಬೆಲ್ಲೊ, ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು. ಶಾಖೆಯ ಶಾಖಾ ಸಹಾಯಕ ನಿರ್ದೇಶಕರಾದ ಶ್ರೀ ಅನಿಲ್ ಪತ್ರಾವೊ ಸ್ವಾಗತಿಸಿದರು. ಶಾಖಾ ಪ್ರಬಂಧಕಿ ಶ್ರೀಮತಿ ಸುನೀತಾ ಡಿಸೋಜಾ ವಂದಿಸಿದರು. ಮನೋಜ್ ಫೆನಾರ್ಂಡಿಸ್, ಕಿರೆಂ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು