News Karnataka Kannada
Sunday, May 05 2024
ಮಂಗಳೂರು

ಡಿ.23 ರಂದು ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ಉದ್ಘಾಟನೆ

New Project 2023 12 22t103252.245
Photo Credit : News Kannada

ಮಂಗಳೂರು:  ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಹಯೋಗದೊಂದಿಗೆ ಕರ್ನಾಟಕ- ಮಹಾರಾಷ್ಟ್ರ ಸಹಮಿಲನ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇದರ ಮಹಾರಾಷ್ಟ್ರ ಘಟಕದ ಉದ್ಘಾಟನೆ ಡಿ.23 ಶನಿವಾರ 11 ಗಂಟೆಗೆ ಸ್ವರ್ಗೀಯ ರಾಧಾ ಭೋಜ ಶೆಟ್ಟಿ ಸುರತ್ಕಲ್‌ ವೇದಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಶಿವಾನಂದ ತಗಡೂರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಕೃಷಿ ಖಾತೆ ಸಂಪುಟ ಸಚಿವ ಎನ್‌ ಚೆಲುವರಾಯ ಸ್ವಾಮಿ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಪತಿ ಯುಟಿ ಖಾದರ್‌, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರು ಡಾ| ಆರ್.ಕೆ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ಸಂಸದರು ಡಾ| ಕೆ.ಸಿ ನಾರಾಯಣ ಗೌಡ, ಮುಂಬಯಿ ಬಂಟ್ಸ್‌ ಸಂಘದ ಅಧ್ಯಕ್ಷರು ಪ್ರವೀಣ್‌ ಭೋಜ ಶೆಟ್ಟಿ, ಮುಂಬಯಿ ಬಿಲ್ಲವ ಅಸೋಸಸಿಯೇಶನ್‌ ನ ಅಧ್ಯಕ್ಷರು ಹರೀಶ್‌ ಜಿ. ಅಮಿನ್‌, ಫ್ರಾನ್ಸಿಸ್‌ ಶಿಪ್ಟಿಂಗ್‌ ಏಜೇನ್ಸಿ ಪ್ರೈವೇಟ್‌ ಲಿಮಿಟೆಡ್‌ ನ ಕಾರ್ಯಧ್ಯಕ್ಷ ಫ್ರಾನ್ಸಿಸ್‌ ರಸ್ಕೀನ್ಹಾ, ವೈಬ್ರೆಂಟ್‌ ಎಕ್ಸ್‌ ಪೋರ್ಟೆಕ್ಸ್‌ ಪ್ರೈವೇಟ್‌ ಲಿಮೆಟೆಡ್‌ ನ ಕಾರ್ಯಧ್ಯಕ್ಷ ಬಿ.ಆರ್‌ ರಾವ್‌, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್‌ ಬಂಟ್ವಾಳ್‌ ಗೌರವ ಅತಿಥಿಗಳಾಗಿ ಪಾಲ್ಗೊ‌ಳ್ಳಲಿದ್ದಾರೆ.

ವಿಶೇಷ ಅಹ್ವಾನಿತರಾಗಿ ಶ್ರೀ ಪುಂಡಾಲಿಕ ಭೀ. ಬಾಳೋಜಿ, ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಉಪಾಧ್ಯಕ್ಷ ಭವಾನಿ ಸಿಂಗ್‌ ಠಾಕೂರ್,ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ, ಮತ್ತೀಕೆರೆ ಜಯರಾಮ, ನಿಂಗಪ್ಪ ಚಾವಡಿ, ಕಾರ್ಯದರ್ಶಿ ಸೋಮಶೇಕರ ಕೆರಗೋಡು ಭಾಗವಹಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು