ಮಂಗಳೂರು: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಡಿ.ವೇದವ್ಯಾಸ್ ಕಾಮತ್ ಅವರು ಕುದ್ರೋಳಿ ವಾರ್ಡಿನಲ್ಲಿ ಮತಯಾಚಿಸಿದರು.
“ಮೊದಲ ಅವಧಿಯಲ್ಲಿ ನಿಷ್ಕಳಂಕವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರಿಂದಲೇ ಜನರು ಬಹಳ ಆತ್ಮೀಯವಾಗಿ ತಮ್ಮ ವಾರ್ಡ್ ಗಳಿಗೆ ಬರ ಮಾಡಿಕೊಳ್ಳುತ್ತಿದ್ದಾರೆ. ಜನರ ನ್ಯಾಯಯುತ ಬೇಡಿಕೆಗಳನ್ನು ಜವಾಬ್ದಾರಿಯುತವಾಗಿ ಈಡೇರಿಸಿದಾಗ ಜನರ ಬೆಂಬಲ ಸದಾ ನಮ್ಮ ಮೇಲೆ ಇರುತ್ತದೆ ಎಂಬುದಕ್ಕೆ ಇದು ಸಾಕ್ಷಿ” ಎಂದು ವೇದವ್ಯಾಸರು ನುಡಿದರು.
ಮನೆ ಮನೆಗೆ ಭೇಟಿ ವೇಳೆ ಸ್ಥಳೀಯ ಬಿಜೆಪಿ ನಾಯಕರು, ಪರಿಸರದವರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.