News Karnataka Kannada
Tuesday, April 30 2024
ಮಂಗಳೂರು

ಬಿಜೆಪಿಯ ಜನಪರ ಆಡಳಿತವನ್ನು ಕರ್ನಾಟಕದ ಜನತೆ ಒಪ್ಪಿಕೊಂಡಿದ್ದಾರೆ- ನರೇಂದ್ರ ಸಾವೈಕರ್

People of Karnataka have accepted BJP's pro-people rule: Narendra Sawaikar
Photo Credit : News Kannada

ಮಂಗಳೂರು: ಬಿಜೆಪಿಯ ಜನಪರ ಆಡಳಿತವನ್ನು ಕರ್ನಾಟಕದ ಜನತೆ ಒಪ್ಪಿಕೊಂಡಿದ್ದು, ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಗೋವಾದ ಮಾಜಿ ಸಂಸದ ನರೇಂದ್ರ ಸಾವೈಕರ್ ಮಂಗಳೂರಿನಲ್ಲಿ ಹೇಳಿದ್ದಾರೆ.

ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಪರ ಮರೋಳಿಯಲ್ಲಿ ನಡೆದ ಮನೆ ಮನೆ ಪ್ರಚಾರದ ವೇಳೆ ಮಾತನಾಡಿದ ಅವರು, ಮನೆ ಮನೆ ಭೇಟಿಯ ವೇಳೆ ವೇದವ್ಯಾಸ್ ಕಾಮತ್ ಪರ ಜನರು ಒಲವು ತೋರುತಿದ್ದಾರೆ. ಕಳೆದ ಐದು ವರ್ಷಗಳ ಅಭಿವೃದ್ಧಿ, ಜನಸೇವೆಯನ್ನು ಬೆಂಬಲಿಸಿ ಮಂಗಳೂರಿನ ಜನತೆ ಮತ್ತೊಮ್ಮೆ ವೇದವ್ಯಾಸ್ ಕಾಮತ್ ಅವರನ್ನು ಚುನಾಯಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುಜನ್ ದಾಸ್ ಕುಡುಪು, ಭಾಸ್ಕರ್ ಚಂದ್ರ ಶೆಟ್ಟಿ, ಕಿರಣ್ ಮರೋಳಿ, ಕೃಷ್ಣ ಎಸ್ಆರ್, ಜಗದೀಶ್ ಶೆಣೈ, ಜಗನ್ನಾಥ್ ಆಡು ಮನೆ, ಪ್ರಶಾಂತ್, ರಾಘು, ಅರುಣ್ ಶೆಟ್ಟಿ,ಸರಳ ಮಾಲತಿ, ವಸಂತ್ ಜೆ ಪೂಜಾರಿ, ಬೋಜ ಅಮೀನ್, ಅನಿತಾ, ಫ್ರಾನ್ಸಿಸ್, ತೇಜಾಕ್ಷ ಸುವರ್ಣ,ಹರಿನಾಕ್ಷ ಭಂಡಾರಿ, ರಂಜಿತ್, ನವೀನ್, ಗುಣನಾಥ್ ಬಂಗೇರ, ಪುಳಿಚ, ಭರತ್, ಮೋಹನ್, ಸತೀಶ್ ರಾಜೇಶ್, ಪವನ್, ಪ್ರವೀಣ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು