ಮೂಡುಬಿದಿರೆ: ನಾಳಿನ ವಿಶ್ವಕಪ್ ಪಂದ್ಯದ ವಿಶ್ವದ ಗಮನಸೆಳೆದಿದೆ. ಏಕದಿನ ವಿಶ್ವಕಪ್ನ ಮಹಾಸಮರಕ್ಕಾಗಿ ಕ್ಷಣಗಣನೆ ಶುರುವಾಗಿದೆ.
ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ಶನಿವಾರ ಉಭಯ ತಂಡಗಳ ನಾಯಕರುಗಳು ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಶೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಐಸಿಸಿ ಟೂರ್ನಿಯ ಭಾಗವಾಗಿರುವ ಈ ಫೋಟೋಶೂಟ್ನಲ್ಲಿ ಹಲವು ರೀತಿಯಲ್ಲಿ ಪೋಸ್ ನೀಡಿದ್ದಾರೆ. ಈ ನಡುವೆ ಮೂಡುಬಿದಿರೆ ದೊಡ್ಮನೆ ರಸ್ತೆ ವಠಾರದಲ್ಲಿ ಸ್ವರ್ಣ ಶಿಲ್ಪಿಯಾಗಿರುವ ವೇಣೂರು ಕುಂಡದಬೆಟ್ಟು ಸತೀಶ ಆಚಾರ್ಯರ ಕ್ರಿಕೆಟ್ ಪ್ರೇಮದಿಂದಾಗಿ ಬರೇ 50 ಮಿಲಿಗ್ರಾಂ ಚಿನ್ನದಲ್ಲಿ ವಿಶ್ವಕಪ್ ಮೂಡಿಬಂದಿದೆ.
ಕೇವಲ 50 ಮಿಲಿಗ್ರಾಂ, 24 ಕ್ಯಾರೆಟ್, 916 ಹಾಲ್ಲೋ ಮಾರ್ಕ್ ನ 1.1ಇಂಚು ಎತ್ತರದ ಈ ವಿಶ್ವಕಪ್ ಪ್ರತಿಕೃತಿ ಎಲ್ಲರ ಗಮನಸೆಳೆಯುತ್ತಿದೆ. ಕಳೆದ 24 ವರ್ಷಗಳಿಂದ ಚಿನ್ನದ ಕೆಲಸ ಮಾಡುತ್ತಿರುವ 34ರ ಹರೆಯದ ಸತೀಶ ಆಚಾರ್ಯರು ಇದುವರೆಗೆ ನಾಲ್ಕು ವಿಶ್ವಕಪ್ ಗಳ ಮಿನಿ ಪ್ರತಿಕೃತಿ ತಯಾರಿಸಿದ್ದಾರೆ.