ಮಣಿಪಾಲ: ವಿಶ್ವಕಪ್ ಕ್ರಿಕೆಟ್ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಮಣಿಪಾಲ್ ಸ್ಯಾಂಡ್ ಆರ್ಟ್ನ ಕಲಾವಿದರಾದ ಶ್ರೀನಾಥ್ಮಣಿಪಾಲ್, ರವಿಹಿರೆಬೆಟ್ಟು ಕಾಪು ಕಡಲ ಕಿನಾರೆಯಲ್ಲಿ ಮರಳುಶಿಲ್ಪ ರಚಿಸಿದರು.
ಕಡಲಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಈ ಕಲಾಕೃತಿಯು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಆಭರಣ ಜ್ಯೂವೆಲರಿಯ ಸಹಯೋಗದೊಂದಿಗೆ ಶಿಲ್ಪ ರಚನೆ ನಡೆಯಿತು.