News Karnataka Kannada
Monday, May 06 2024
ಮಂಗಳೂರು

ಬಂಟ್ವಾಳ ಕ್ಷೇತ್ರದಲ್ಲಿ ಕೋಮುದಳ್ಳುರಿ ದೂರವಾಗಿ ಅಭಿವೃದ್ಧಿ ಪರ್ವ, ಹರಿಕೃಷ್ಣ ಬಂಟ್ವಾಳ

Development parva in Bantwal constituency, harikrishna bantwal
Photo Credit : News Kannada

ಮಂಗಳೂರು: ಐದು ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಕೋಮುದ್ವೇಷದ ಘಟನೆ, ಹಿಂಸಾಚಾರದಂತಹ ಘಟನೆಗಳು ಸಂಭವಿಸಿಲ್ಲ. ಬಂಟ್ವಾಳ ಕ್ಷೇತ್ರವು ಅಭಿವೃದ್ಧಿ ವಿಚಾರದಲ್ಲಿ ಪ್ರಗತಿಪಥದಲ್ಲಿ ಮಾದರಿಯಾಗಿ ಮುಂದುವರಿಯುತ್ತಿದೆ. ಮುಂದಿನ ದಿನಗಳಲ್ಲಿಯೂ ಸಾಮರಸ್ಯ, ಭಾವೈಕ್ಯದ ಕ್ಷೇತ್ರವಾಗಿ ಮಿಂಚಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮಾಧ್ಯಮ ವಿಭಾಗದ ಕೇಂದ್ರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ರಾಜೇಶ್‌ ನಾಯ್ಕ್‌ ೨೧೦೮.೫೩ ಕೋಟಿ ರೂ ಅನುದಾನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೋಳಿಸಿದ್ದಾರೆ ಎಂದರು.

ರಾಜೇಶ್ ನಾಯ್ಕ್ರ ಅವವರ ಶ್ರಮದಿಂದ ಪೂಂಜಾಲಕಟ್ಟೆಯಲ್ಲಿ ನಾರಾಯಣಗುರು ವಸತಿ ಶಾಲೆ ಆರಂಭವಾಗಿದ್ದು,೧೩೫ ಕೋಟಿ ರೂ ವೆಚ್ಚದಲ್ಲಿ ಜಕ್ರಿಬೆಟ್ಟುವಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಐಸಿಯು ಬಸ್ ಸೌಲಭ್ಯವನ್ನು ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ಒದಗಿಸಲಾಗಿದೆ. ಕ್ಷೆತ್ರದಲ್ಲಿ ೧,೫೧೫ ರಸ್ತೆಗಳ ನಿರ್ಮಾಣ. ಕಿಂಡಿ ಅಣೆಕಟ್ಟು, ೩೧೮ ಧಾರ್ಮಿಕ ಕ್ಷೇತ್ರಗಳಿಗೆ ಮೂಲ ಸೌಕರ್ಯಗಳನ್ನು ನೀಡಲಾಗಿದೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.

ಕೋಮುದಳ್ಳುರಿ ದೂರ: ಕೋಮು ಘರ್ಷಣೆಯಿಂದ ಎರಡೂ ಧರ್ಮದವರ ಹತ್ಯೆ,ಹೊಡೆದಾಟ, ಲವ್ ಜಿಹಾದ್, ಗೋಹತ್ಯೆ, ಲವ್ ಜಿಹಾದ್‌ನಂತಹ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ. ಇದರಿಂದ ರಾಜೇಶ್ ನಾಯ್ಕ್ ಗೆಲುವು ಖಚಿತ ಎಂದು ಮನಗಂಡ ಕಾಂಗ್ರಸ್ ನವರು ಕೇರಳದಿಂದ ಮುಸ್ಲಿಂ ಲೀಗ್‌ ನಾಯಕರನ್ನು ಕರೆಸಿ ಹೇಳಿಕೆ ನೀಡಿಸಿದ್ದಾರೆ.

ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆಗೆ ಕಾರಣವಾದ ಮುಹಮ್ಮದ್ ಆಲಿ ಜಿನ್ನಾ ಅವರ ಪಕ್ಷದ ನಾಯಕನನ್ನು ಕೆರೆಸಿದ ಹಿಂದಿನ ಉದ್ದೇಶವೆನೆಂದು ರಮಾನಾಥ ರೈ ಸ್ಪಷ್ಟಪಡಿಸಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು