ಬಂಟ್ವಾಳ: ಬಾಳ ಮೇಳ ಕಾರ್ಯಕ್ರಮ ಅಂಗನವಾಡಿ ಕೇಂದ್ರ ಪಡ್ಡಾಯೂರು ಜ 29 ರಂದು ನಡೆಯಿತು. ಅಂಗನವಾಡಿ ಒಂದು ಬಹುಮುಖ ಕೆಲಸ ಮಾಡುವ ಕೇಂದ್ರ ಶಾಸಕರು ಸಂಜೀವ ಮಠದೂರು ಗರ್ಭಿಣಿಯರಿಗೆ ಪೋಷಣೆ, ಮೊಟ್ಟೆ ಕೊಡುವ ಕೇಂದ್ರ, ಮತದಾರ ಪಟ್ಟಿ ಸೇರ್ಪಡೆ ಶ್ರೀ ಶಕ್ತಿ ಸಂಘ ಮಹಿಳಾ ಸಂಘ ಹೀಗೆ ಹಲವು ಕಾರ್ಯಕ್ರಮ ಗಳಿಗೆ ಒಂದು ಕೇಂದ್ರವೆ ಅಂಗನವಾಡಿ.
ಎಲ್ಲಾ ಅಂಗನವಾಡಿ ಕೇಂದ್ರ ಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಕೊಠಡಿ ಹೀಗೆ ಸರಕಾರದ ಯೋಜನೆ ಗಳನ್ನು ಅಂಗನವಾಡಿಗಳಿಗೂ ಕೊಡುವ ಕೆಲಸ ಆಗಿದೆ.
ಕಾರ್ಯಕ್ರಮದಲ್ಲಿ ಕು ವೈಷ್ಣವಿ ಅಧ್ಯಕ್ಷತೆ ವಹಿಸಿದರು, ಮಾ ನಿಶಾನ್ ಉದ್ಘಾಟಿಸಿದರು ಮುಖ್ಯ ಅತಿಥಿಯಾಗಿ ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಣಿಲ ತಿಮಪ್ಪ ಶೆಟ್ಟಿ, ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೂವಪ್ಪು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುಮಿತ್ರ, ಬಾಲವಿಕಾಸ ಸಮಿತಿ ಉಪಾಧ್ಯಕ್ಷ ರಾಮಣ್ಣ ಗೌಡ ಉಪಸ್ಥಿತರಿದ್ದರು.