News Karnataka Kannada
Thursday, May 09 2024
ಮಂಗಳೂರು

ಅಣೆಕಟ್ಟಿನಲ್ಲಿ ಕ್ರಿಕೆಟ್‌ ಆಟ: ಸಚಿವರ ಭ್ರಷ್ಟಾಚಾರಕ್ಕೆ ಸಾಕ್ಷಿ ಬೇಕೆ ಎಂದ ಮುತಾಲಿಕ್‌

Cricket game at dam: Muthalik asks for proof of minister's corruption
Photo Credit : News Kannada

ಮಂಗಳೂರು: ಅಜೆಕಾರು ಗ್ರಾಮದ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಪ್ರದೇಶಕ್ಕೆ ಶ್ರೀರಾಮಸೇನೆ ಮುಖಂಡ, ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಪ್ರಮೋದ್‌ ಮುತಾಲಿಕ್‌ ಭೇಟಿ ನೀಡಿದರು.

ಈ ಯೋಜನೆಗೆ 108 ಕೋಟಿ ರೂ. ವೆಚ್ಚವಾಗಿದ್ದು, ಅಲ್ಲದೆ ತಡೆಗೋಡೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 30 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆಯಾಗಿದೆ. ಈ ಯೋಜನೆ ಶಾಸಕರ ಜೇಬು ತುಂಬಿಸುವ ಯೋಜನೆಯಾಗಿದ್ದು, ಇಲ್ಲಿ ಒಂದು ಹನಿ ನೀರು ಕೂಡ ಶೇಖರಣೆಯಾಗಿಲ್ಲ ಎಂದು ಆರೋಪಿಸಿದರು. ಯಾವ ಉದ್ದೇಶದಿಂದ ಈ ಯೋಜನೆಯನ್ನು ಮಂತ್ರಿಗಳು ಮಾಡಿದ್ದರೋ ಅದು ಸಂಪೂರ್ಣವಾಗಿ ವಿಫಲವಾಗಿದೆ. ಯೋಜನೆ ಅವೈಜ್ಞಾನಿಕವಾಗಿದೆ. ರಸ್ತೆಯಲ್ಲಿ ಓಡಾಡುವ ಜನರಿಗೆ ತೋರಲೆಂದು ಏತ ನೀರಾವರಿ ಯೋಜನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಳೆಗಾಲ ಆರಂಭಕ್ಕೆ 2 ತಿಂಗಳು ಬಾಕಿಯಿದೆ. ಈಗ ನೀರಿನ ಹಾಹಾಕಾರ ಇದೆ. ಜನರಿಗೆ ಪ್ರಸ್ತುತ ನೀರಿನ ಅಗತ್ಯವಿದೆ. ಆದರೆ ಈಗ ಅಣೆಕಟ್ಟಿಯಲ್ಲಿ ಹನಿ ನೀರೂ ಕೂಡ ಇಲ್ಲ ಎಂದರು. ಯೋಜನೆ ಉದ್ಘಾಟನೆಗೊಂಡು ವರ್ಷ ಪೂರ್ಣಗೊಂಡಿಲ್ಲ. 1 ಕೋಟಿ ರೂ. ಖರ್ಚು ಮಾಡಿ ಉದ್ಘಾಟನಾ ಕಾರ್ಯಕ್ರಮ ಮಾಡಿದ್ದಾರೆ. ಯೋಜನೆ ಮೂಲಕ ಶಾಸಕರು ಜನರ ಕಣ್ಣಿಗೆ ಮಣ್ಣೆರೆಚಿ ಮೋಸ ಮಾಡಿದ್ದಾರೆ. ಜನರ ಅಭಿವೃದ್ಧಿಗೆ ಅಣೆಕಟ್ಟು ಕಟ್ಟಿಲ್ಲ. ಜನಪ್ರತಿನಿಧಿ, ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಕ್ರಿಮಿನಲ್‌ ಪ್ರಕರಣಕ್ಕೆ ಚಿಂತಿಸುತ್ತಿದ್ದೇವೆ.

ಹರೀಶ್‌ ಅಧಿಕಾರಿ, ರಾಘವ್‌ ಮುದ್ರಾಡಿ ನಾಗೇಶ್‌ ಪೈ, ವಿವೇಕಾನಂದ ಶೆಣೈ, ಸತ್ಯರಂಜನ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಯೋಜನೆ ಪ್ರದೇಶದಲ್ಲಿ ಕ್ರಿಕೆಟ್‌ ಆಟ: ಎಣ್ಣೆಹೊಳೆ ಏತ ನೀರಾವರಿ ಯೋಜನೆ ಪ್ರದೇಶದಲ್ಲಿಯೇ ಶ್ರೀರಾಮ ಸೇನೆ ಮುಖಂಡ ಮುತಾಲಿಕ್‌, ಹರೀಶ್‌ ಅಧಿಕಾರಿ, ರಾಘವ್‌ ಮುದ್ರಾಡಿ ನಾಗೇಶ್‌ ಪೈ, ವಿವೇಕಾನಂದ ಶೆಣೈ, ಸತ್ಯರಂಜನ್‌ ಶೆಟ್ಟಿ ಮೊದಲಾದವರು ಕ್ರಿಕೆಟ್‌ ಆಟವಾಡುವ ಮೂಲಕ ನೀರಿನ ಸಂಗ್ರಹವಿಲ್ಲದಿರುವುದನ್ನು ತೋರಿಸಿ ವ್ಯಂಗ್ಯವಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು