News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಚುನಾವಣಾ ಕಣಕ್ಕೆ

Sri Ram Sene chief Pramod Muthalik to contest as independent candidate
Photo Credit : News Kannada

ಮಂಗಳೂರು: 2023 ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಸುಳಿವು ನೀಡಿದ್ದಾರೆ. ಬೆಳಗಾವಿ ಬಾಗಲಕೋಟೆ, ಮಂಗಳೂರು, ಉಡುಪಿ, ಜಿಲ್ಲೆಯಿಂದ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡ ಹೇರುತ್ತಿದ್ದಾರೆ. ಬೆಳಗಾವಿ ನಗರದ 2ಕ್ಷೇತ್ರ ಬಾಗಲಕೋಟೆಯ ತೇರದಾಳ, ಜಮಖಂಡಿ ದಕ್ಷಿಣ ಜಿಲ್ಲೆಯ ಕಾರ್ಕಳ, ಪುತ್ತೂರು, ಚಿಕ್ಕಮಗಳೂರು, ಶೃಂಗೇರಿಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. 1ಕ್ಷೇತ್ರದ ಬಗ್ಗೆ ನಿರ್ಣಯ ಮಾಡುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಮುತಾಲಿಕ್ ಹೇಳಿದ್ದಾರೆ.

2014 ರಿಂದ ಬಿಜೆಪಿ ತನಗೆ ಟಿಕೆಟ್ ಕೊಡುತ್ತೆ ಎಂದು ಭಾವಿಸಿದ್ದೆ, ಬಿಜೆಪಿ ಪಕ್ಷವನ್ನು ಕಟ್ಟಿದವರು ನಾವು ಆದರೆ ಬಿಜೆಪಿ ನಮಗೆ, ನನಗೆ ನಿರಂತರ ತೊಂದರೆ ಕೊಟ್ಟಿದೆ. ಹಿಂದುಗಳ ಹೆಸರಲ್ಲಿ ಗೆದ್ದು ಬಂದು ಅವರ ಮೇಲೆ ದೌರ್ಜನ್ಯ ಎಸಗಿದೆ. ಇದಕ್ಕಾಗಿ ಚುನಾವಣೆಗೆ ನಿಲ್ಲುವ ತೀರ್ಮಾನಕ್ಕೆ ಬಂದಿದ್ದೇನೆ. ನಾನು ಕಟ್ಟ ಹಿಂದುತ್ವವಾದಿ ಚುನಾವಣೆಯಲ್ಲಿ ಗೆದ್ದರೆ ನಾನು ಹಿಂದುತ್ವದ ಪರ ಇರುವ ಬಿಜೆಪಿಗೆ ಬೆಂಬಲಿಸುತ್ತೇನೆ ಆದರೆ ಬಿಜೆಪಿಯ ಹಿಂದುತ್ವ ಬೇಕಾಗಿಲ್ಲ.

ಬಿಜೆಪಿ ಸದ್ಯ ಕಾಂಗ್ರೆಸಿಗರೇ ತುಂಬಿದ್ದಾರೆ ಹಿಂದುತ್ವದ ಹಿನ್ನೆಲೆ ಹೊಂದಿದವರಿಗೆ ಬಿಜೆಪಿಯಲ್ಲಿ ಮರ್ಯಾದೆಯಿಲ್ಲ. ಹೊಸ ಪಕ್ಷ ಮಾಡುವ ಗೋಜಿಗೆ ಹೋಗಲ್ಲ ಸ್ವತಂತ್ರವಾಗಿ ಸ್ಪರ್ಧಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಡಿಸೆಂಬರ್ ಮೊದಲ ವಾರದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅನ್ನೋದನ್ನಾ ಪ್ರಕಟಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು