ಮಂಗಳೂರು: ಚಾಮರಾಜಪೇಟೆ ವಿವಾದ ಹಿನ್ನೆಲೆ , ಸರಕಾರದ ಭೂಮಿಯೆಂದು ನ್ಯಾಯಾಲಯ ಆದೇಶ ಕೊಟ್ಟಿದೆ ಇದರ ನಿರ್ಣಯ ಸರಕಾರ ತೆಗೆದುಕೊಳ್ಳಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಸರಕಾರ ಆ ಮೈದಾನದಲ್ಲಿ ಹಬ್ಬಕ್ಕೆ ಅವಕಾಶ ನೀಡಬೇಕೇ ಬೇಡವೇ ಎಂದು ಚಿಂತನೆಯಲ್ಲಿದೆ , ನೋವಿನ ಮಾತೇನೆಂದರೆ ಹಬ್ಬಕ್ಕೆ ಅವರ ಅನುಮತಿ ತೆಗೆದುಕೊಳ್ಳುವುದು ವಾಡಿಕೆಯಾಗಿದೆ.
ಹಬ್ಬಕ್ಕೆ ಶುಭಾಶಯ ನೀಡಲು ಅವಕಾಶ ನೀಡಲು ಈ ಸರಕಾರ ಬಿಡುತ್ತಿಲ್ಲ. ಬಹುಸಂಖ್ಯಾತ ಹಿಂದೂಗಳಿಗೆ ಈ ರೀತಿಯಾದ ಶಿಕ್ಷೆ ಕೊಡಬೇಡಿ ಅಲ್ಲದೆ ಆ ಮೈದಾನದಲ್ಲಿ ಹಬ್ಬವನ್ನ ಆಚರಣೆ ಮಾಡಲು ಅವಕಾಶ ಕೊಡಿ , ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು.