ಮಂಗಳೂರು: ಸಂತ ಅನ್ನಮ್ಮನವರ ದೇವಾಲಯ ಕಲರೈ ಇದರ ವಾರ್ಷಿಕ ಹಬ್ಬ ಜುಲೈ 26ರಂದು ದಿವ್ಯ ಬಲಿಪೂಜೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಪಾಸ್ಟರಲ್ ಇನ್ ಸ್ಟಿಟ್ಯೂಟ್ ನ ನಿರ್ದೇಶಕರಾದ ವಂದನೀಯ ಫಾ. ಸಂತೋಷ್ ರೊಡ್ರಿಗಸ್ ಪ್ರಧಾನ ಗುರುಗಳಾಗಿ, ಸಿಟಿ ವಲಯದ ಸ್ಥಳೀಯ ಚರ್ಚುಗಳ ಮುಖ್ಯಸ್ಥರು ಹಾಗೂ ವಾಮಂಜೂರು ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಜೇಮ್ಸ್ ಡಿಸೋಜಾ, ಕಲರೈ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಜೋಸೆಫ್ ಮಸ್ಕರೇನ್ಹಸ್ ಹಾಗೂ ಇತರ ಧರ್ಮಗುರುಗಳೊಂದಿಗೆ ಬಲಿ ಪೂಜೆಯನ್ನು ಅರ್ಪಿಸಲಾಯಿತು.
ಬಲಿಪೂಜೆಯ ಬಳಿಕ ಹಬ್ಬದ ಸಂಭ್ರಮಾಚರಣೆಗೆ ಧನ ಸಹಾಯ ನೀಡಿದ ಸಹೃದಯ ದಾನಿಗಳಿಗೆ ಮತ್ತು ಪೋಷಕರಿಗೆ ಮೊಂಬತ್ತಿ ಯನ್ನು ನೀಡಿ ಗೌರವಿಸಲಾಯಿತು. ಚರ್ಚ್ ಕುಟುಂಬದ 85 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹಬ್ಬದ ಪ್ರಯುಕ್ತ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಬ್ರಾಸ್ ಬ್ಯಾಂಡ್ ಹಬ್ಬದ ಸಂಭ್ರಮಾಚರಣೆಗೆ ಹೊಸ ಮೆರುಗನ್ನು ನೀಡಿತ್ತು.
ಬಲಿಪೂಜೆಯ ಬಳಿಕ ನೆರೆದ ಎಲ್ಲ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.