ಮಂಗಳೂರು: ಸೈಂಟ್ ಅಂಥೋನಿ ಜಾಕೋಬೈಟ್ ಸಿರಿಯನ್ ಚರ್ಚ್ ಜೆಪ್ಪು ಮಂಗಳೂರು ಇದ್ರ ಪುರಾತನ ಸ್ಮಶಾನದ ಆವರಣಗೋಡೆ ನಿರ್ಮಾಣಕ್ಕೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದ್ದು ಸೈಂಟ್ ಅಂಥೋನಿ ಜಾಕೋಬೈಟ್ ಸಿರಿಯನ್ ಚರ್ಚ್ ವತಿಯಿಂದ ಅಭಿನಂದನ ಕಾರ್ಯಕ್ರಮ ಮತ್ತು ಶಂಕು ಸ್ಥಾಪನಾ ಕಾರ್ಯಕ್ರಮ ಚರ್ಚ್ ಆವರಣದಲ್ಲಿ ನಡೆಸಲಾಯಿತು.
ಈ ವೇಳೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಸೈಂಟ್ ಅಂಥೋನಿ ಜಾಕೋಬೈಟ್ ಸಿರಿಯನ್ ಚರ್ಚ್ ನ ಧರ್ಮಗುರು ಫಾ. ಎಲ್ಡೋಸ್ ಜೋರ್ಜ್, ಸ್ಥಳೀಯ ಕಾರ್ಪೋರೆಟರ್ ಭರತ್ ಕುಮಾರ್, ಡಾ. ಜೋ ವರ್ಗೀಸ್, ವರುಣ್ ರಾಜ್ ಅಂಬಟ್, ರೋಶನ್ ರೊನಾಲ್ಡ್, ಅಜಿತ್ ಡಿಸಿಲ್ವ, ಸುಶೀಲ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.