ಬೆಳ್ತಂಗಡಿ: ಇಲ್ಲಿನ ಕೊಂಬಿನಡ್ಕ ನಿವಾಸಿ ವೇದಮೂರ್ತಿ ಚಂದ್ರಶೇಖರ ಗೋಖಲೆ(67)ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ತಡರಾತ್ರಿ ನಿಧನ ಹೊಂದಿದರು.
ಸಣ್ಣ ಕೃಷಿಕರಾಗಿದ್ದ ಅವರು ಜ್ಯೋತಿಷಿ, ಅರ್ಚಕರಾಗಿದ್ದು, ಪೌರೋಹಿತ್ಯವನ್ನು ನಿರ್ವಹಿಸುತ್ತಿದ್ದರು. ತಾಲೂಕಿನ ನಾನಾ ದೇವಸ್ಥಾನಗಳ ಜೀರ್ಣೋದ್ದಾರ,ಬ್ರಹ್ಮ ಕಲಶ ಕಾರ್ಯಕ್ರಮಗಳಲ್ಲಿ ಪೌರೋಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.