News Karnataka Kannada
Wednesday, May 08 2024
ಮಂಗಳೂರು

ಬೆಳ್ತಂಗಡಿ: ಇಡೀ ಸರಕಾರವೇ ಭ್ರಷ್ಟ ಸರಕಾರವಾಗಿದೆ ಎಂದ ವಸಂತ ಬಂಗೇರ

Blt
Photo Credit : By Author

ಬೆಳ್ತಂಗಡಿ; ರಾಜ್ಯಸರಕಾರ ಗ್ರಾಮ ಪಂಚಾಯತು ಅಧ್ಯಕ್ಷರುಗಳ ಹಾಗು ಸದಸ್ಯರ ಅಧಿಕಾರವನ್ನು ಕಸಿದುಕೊಂಡು ಅಧಿಕಾರ ವಿಕೇಂದ್ರೀಕರಣದ ಕಲ್ಪನೆಯನ್ನೇ ನಾಶಗೊಳಿಸಲು ಹೊರಟಿದೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಆರೋಪಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಪಂಚಾಯತಿನ ಎದುರು ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಮತ್ತು ರಾಜೀವ ಗಾಂಧಿ ಪಂಚಾಯತಿ ರಾಜ್ ಸಂಘಟನೆಯ ಬ್ಲಾಕ್ ಘಟಕಗಳ ನೇತೃತ್ವದಲ್ಲಿ ಪಂಚಾಯತಿ ರಾಜ್ವಕಾಯ್ದೆಯಲ್ಲಿ ತಂದಿರುವ ತಿದ್ದು ಪಡಿಗಳನ್ನು ಕೈಬಿಡಬೇಕು, ಜಿಲ್ಲಾ ಪಂಚಾಯತು ತಾಲೂಕು ಪಂಚಾಯತು ಚುನಾವಣೆಗಳನ್ನು ನಡೆಸಬೇಕು ಮುಂತಾದ ಬೇಡಿಕೆಗಳನ್ನಿಟ್ಟು ನಡೆಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಇಡೀ ಸರಕಾರವೇ ಭ್ರಷ್ಟ ಸರಕಾರವಾಗಿದೆ ಎಂದು ಆರೋಪಿಸಿದ ಅವರು ಇಲ್ಲಿಯೂ ಭ್ರಷ್ಟಾಚಾರ ನಡೆಸಲು ಜನಪ್ರತಿನಿಧಿಗಳ ಅಧಿಕಾರವನ್ನು ಕಸಿಯಲು ಮುಂದಾಗಿದೆ ಎಂದರು.

ಮಾಜಿ ಸಚಿವ ಕೆ ಗಂಗಾಧರ ಗೌಡ ಮಾತನಾಡಿ ಕಾಂಗ್ರೆಸ್ ಪಕ್ಷ ರಾಜೀವ ಗಾಂಧಿಯವರ ಕಲ್ಪನೆಯಂತೆ ಅಧಿಕಾರ ವಿಕೇಂದ್ರೀಕರಣವನ್ನು ಜಾರಿಗೆ ತಂದು ಸಾಮಾನ್ಯ ಜನರ ಕೈಗೆ ಶೋಷಿತರ ಕೈಗೆ ಅಧಿಕಾರವನ್ನು ನೀಡಿತ್ತು ಅದನ್ನು ಕಸಿದುಕೊಳ್ಖುವ ಕಾರ್ಯವನ್ನು ಇದೀಗ ಬಿಜೆಪಿ ಸರಕಾರ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸರಕಾರ ಇದೀಗ ಜನಪ್ರತಿನಿಧಿಗಳ ಅಧಿಕಾರವನ್ನೂ ಕಸಿಯಲು ಮುಂದಾಗುತ್ತಿದ್ದು ಭ್ರಷ್ಟ ಸರಕಾರವನ್ನು ಕಿತ್ತೊಗೆಯಲು ಎಲ್ಲರೂ ಪಣ ತೊಡಬೇಕಾಗಿದೆ ಎಂದರು.

ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೋಲ್ನಾಡು ಮಾತನಾಡಿ ವಿಕೇಂದ್ರೀಕರಣ ಮತ್ತು ಸಾಮಾಜಿಕ ನ್ಯಾಯವನ್ನು ಒಪ್ಪದ ಬಿಜೆಪಿ ಪ್ರಜಾ ಪ್ರಭುತ್ವದ ಅಡಿಗಲ್ಲು ಅಲುಗಾಡಿಸುವ ಕಾರ್ಯ ಮಾಡುತ್ತಿದ್ದಾರೆ ಇದನ್ನು ಎಲ್ಲರೂ ಸೇರಿ ವಿರೋಧಿಸಬೇಕಾಗಿದೆ. ಸಚಿವರುಗಳ ಮೇಲೆ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ಮಾತನಾಡದವರಿಗೆ ಗ್ರಾಮಪಂಚಾಯತಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದ ಅವರು ತಾಲೂಕು ಪಂಚಾಯತು ಜಿಲ್ಲಾ ಪಂಚಾಯತು ಚುನಾವಣೆ ನಡೆಸದ ಸರಕಾರ ಇದರ ಅನುದಾನವನ್ನು ಅಧಿಕಾರಿಗಳ ಮೂಲಕ ಮನಬಂದಂತೆ ಉಪಯೋಗಿಸುತ್ತಿದ್ದಾರೆ ಕೂಡಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್, ಪಕ್ಷದ ಮುಖಂಡರುಗಳಾದ ಮನೋಹರ ಕುಮಾರ್, ಉಷಾ ಶರತ್, ಅಬ್ದುಲ್ ರಹಿಮಾನ್ ಪಡ್ಪು, ಜಯವಿಕ್ರಮ ಕಲ್ಲಾಪು, ಅಭಿನಂದನ್ ಹರೀಶ್, ಅಶ್ರಫ್ ನೆರಿಯ,ರಾಜಶೇಖರ ಶೆಟ್ಟಿ, ನಮಿತಾ ಪೂಜಾರಿ, ಸಲೀಂ ಗುರುವಾಯನಕೆರೆ, ಡಿ ಜಗದೀಶ್, ಗೋಪೀನಾಥ ನಾಯಕ್, ಗಫೂರ್ ಪುದುವೆಟ್ಟು, ಮಹಮ್ಮದ್ ರಫಿ ಹಾಗೂ ಗ್ರಾ.ಪಂ ಸದಸ್ಯರುಗಳು ಮುಖಂಡರುಗಳು ಇದ್ದರು. ಪ್ರತಿಭಟನೆಯ ಬಳಿಕ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರ ಮೂಲಕ ಸರಕಾರಕ್ಕೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ರೋಯಿ ಪುದುವೆಟ್ಟು ಸ್ವಾಗತಿಸಿದರು. ಪ್ರಶಾಂತ ವೇಗಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಹರೀಶ್ ಪೂಂಜ ಅವರೇ ನಿಮಗೆ ಗನ್ ಮ್ಯಾನ್ ಬೇಕಾದರೆ ಅರ್ಜಿ ಕೊಡಿ ಒಂದಲ್ಲ ಮೂರು ಕೊಡಿಸುತ್ತೇನೆ ಈ ರೀತಿಯ ಕಟ್ಟು ಕತೆ ನಾಟಕ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸ ಬೇಡಿ- ವಸಂತ ಬಂಗೇರ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು