News Karnataka Kannada
Monday, May 06 2024
ಮಂಗಳೂರು

ಬೆಳ್ತಂಗಡಿ: ಸೋಮಾವತಿ ನದಿ ನೀರಿಗೆ ಕಿಡಿಗೇಡಿಗಳಿಂದ ವಿಷ ಪ್ರಾಶನ

Belthangady: Somvati river water poisoned by sparks
Photo Credit : By Author

ಬೆಳ್ತಂಗಡಿ:  ಪಟ್ಟಣದ ಕುಡಿಯುವ ನೀರಿನ ಮೂಲಕ್ಕೆ ವಿಷ ಹಾಕಿರುವ ಅಮಾನವೀಯ ವಿದ್ಯಮಾನ ನಡೆದಿದ್ದು ನಿವಾಸಿಗಳು ಆತಂಕಿತರಾಗಿದ್ದಾರೆ.ಪಟ್ಟಣದ ಸನಿಹ ಹರಿಯುತ್ತಿರುವ ಸೋಮಾವತಿ ನದಿ ನೀರಿಗೆ ಕಿಡಿಗೇಡಿ ಳು ವಿಷ ಪದಾರ್ಥ ಹಾಕಿರುವ ಪರಿಣಾಮ ಸಾವಿರಾರು ಮೀನುಗಳು ಸತ್ತುಬಿದ್ದಿವೆ.

ಇಂದು ಮುಂಜಾನೆ ವೇಳೆ ಘಟನೆ ವರದಿಯಾಗಿದ್ದು, ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿದ್ದ ನದಿಯಲ್ಲಿದ್ದ ಘಟಕಕ್ಕೆ ವಿಷ ಪ್ರಾಶನ ಮಾಡಿದ ಪರಿಣಾಮ ಸಾವಿರಾರು ಮೀನುಗಳ ಸತ್ತುಬಿದ್ದಿವೆ.

ಪಟ್ಟಣಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದೆ. ಅಣೆಕಟ್ಟಿನ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.

ಕಳೆದ ಮೂರು ವರ್ಷ ಇದೇ ಸ್ಥಳದಲ್ಲಿ ಹಿಂದೊಮ್ಮೆ ಈ ರೀತಿಯ ಕೃತ್ಯ ನಡೆಸಲಾಗಿತ್ತು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಪಟ್ಟಣ ಪಂಚಾಯತ್ ಕೃತ್ಯದ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.

ನದಿಯಲ್ಲಿ ನೀರು ಬತ್ತುತ್ತಿರುವ ಪರಿಸ್ಥಿತಿಯಲ್ಲಿ ಮತ್ತು ಕುಡಿಯುವ ನೀರಿನ ಕೊರತೆವಯಿರುವ ಸಮಯದಲ್ಲಿ ಇಂತಹ ಕೃತ್ಯ ನಡೆಸಿದವರ ವಿರುದ್ಧ ಜನರಿಂದ ಬಹಳಷ್ಟು ಅಸಮಾಧಾನ ವ್ಯಕ್ತವಾಗಿದ್ದು ನಾಗರಿಕರು ನದಿ ತೀರಕ್ಕೆ ಬಂದು ಪರಿಸ್ಥಿತಿ‌‌ ವೀಕ್ಷಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು