ಬೆಳ್ತಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಕುತ್ಲೂರು ನಿವಾಸಿ ಎಮ್.ಎಸ್.ರಾಜು (72) ನ. 19 ರಂದು ಅಲ್ಪಕಾಲದ ಸ್ವಗೃಹದಲ್ಲಿ ಅಸ್ವಾಸ್ಥ್ಯದಿಂದ ನಿಧನರಾದರು.
ಮಂಡಲ ಪ್ರಧಾನರಾಗಿದ್ದ ಅವರು ನಾರಾವಿ ಭಾಗದಲ್ಲಿ ಸಂಘದ ಅನ್ಯಾನ್ಯ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘವನ್ನು ಕಟ್ಟಿ ಬೆಳೆಸಿದ್ದರು ಹಾಗೂ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದರು. ಕೃಷಿ ಜೀವನವನ್ನು ನಡೆಸುತ್ತಿದ್ದ ಇವರು ಪತ್ನಿ, ಮೂವರು ಪುತ್ರರನ್ನು, ಓರ್ವ ಪುತ್ರಿಯನ್ನು ಅಗಲಿದ್ದಾರೆ.ಕೆಲ ತಿಂಗಳುಗಳ ಹಿಂದೆ ಗೃಹಸಚಿವ ಅರಗ ಜ್ಞಾನೇಂದ್ರ, ಶಾಸಕ ಹರೀಶ ಪೂಂಜ ಅವರು ರಾಜು ಅವರನ್ನು ಭೇಟಿ ಮಾಡಿ ಕ್ಷೇಮ ಸಮಾಚಾರವನ್ನು ವಿಚಾರಿಸಿದ್ದರು.