News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ | ಕಾಜೂರು ದರ್ಗಾ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜ ನೆರವು ಶ್ಲಾಘನೀಯ: ಅಹ್ಮದ್ ಬಾವ

MLA Harish Poonja helps in the development of Kajoor Dargah
Photo Credit :

ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ದ ಕಾಜೂರು ದರ್ಗಾದ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಯಾವುದೇ ತಾರತಮ್ಯ ಮಾಡದೆ ಎಲ್ಲ ರೀತಿಯ ನೆರವನ್ನೂ ನೀಡಿದ್ದಾರೆ. ಇದನ್ನು ಸಹಿಸದವರು ವ್ಯಂಗ್ಯ ಮಾಡುವುದು ಖಂಡನೀಯ. ಅಲ್ಲಿನ ದರ್ಗಾದ ವಿಚಾರವನ್ನು ನೋಡಿಕೊಳ್ಳಲು ಕಾಜೂರಿನ ಆಡಳಿತ ಮಂಡಳಿಯಿದೆ, ಜನರಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಸಹಿಸೆವು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಅಹ್ಮದ್ ಬಾವ ಸ್ಪಷ್ಟಪಡಿಸಿದ್ದಾರೆ.

ಅವರು ಸೋಮವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗೊಂದಲ ಸೃಷ್ಟಿಸುವವರಿಗೆ ಎಚ್ಚರಿಕೆ ನೀಡಿದರು. ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾಕ್ಕೆ ಕಾಜೂರಿನ ಜನತೆಗೆ ಯಾವುದೇ ತಾರತಮ್ಯ ಮಾಡದೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ನೆರೆ ಬಂದಾಗ ಅತಿ ಹೆಚ್ವು ಸಮಸ್ಯೆಗೆ ಒಳಗಾಗಿದ್ದ ಕಾಜೂರು ಪ್ರದೇಶದ ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕರು ಎಲ್ಲ ರೀತಿಯ ನೆರವನ್ನೂ ಯಾವುದೇ ಜಾತಿ ಧರ್ಮದ ತಾರತಮ್ಯ ತೋರದೆ ನೀಡಿದ್ದಾರೆ. ಇದು ಕಾಜೂರಿನ ಎಲ್ಲ ಜನರಿಗೂ ತಿಳಿದಿರುವ ವಿಚಾರವಾಗಿದೆ.ಕೊರೊನಾ ಸಂದರ್ಭ ತಮ್ಮದೇ ಖರ್ಚಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಚಿಕಿತ್ಸೆ‌ಗೆ ವ್ಯವಸ್ಥೆ ಮಾಡಿರುವುದನ್ನು ಮರೆಯುವಂತಿಲ್ಲಾ.

ಇದೀಗ ಕಾಜೂರು ದರ್ಗಾದ ಆಡಳಿತ ಸಮಿತಿಯ ಹಾಗೂ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮುಸಾಫಿರ್ ಖಾನ ಕಟ್ಟಡವನ್ನು ನಿರ್ಮಿಸಲು ಶಾಸಕರ ಶಿಫಾರಸ್ಸಿನ ಮೇಲೆ ರಾಜ್ಯ ವಕ್ಫ್ ಸಚಿವೆ ಶಶಿಕಾಲಾ ಜೊಲ್ಲೆ ಹಾಗೂ ರಾಜ್ಯ ವಕ್ಪ್ ಮಂಡಳಿಯ ಅಧ್ಯಕ್ಷ ಶಾಫಿ ಸ ಅದಿಯವರ ಪ್ರಯತ್ನದಿಂದ ಇದೀಗ 1.5ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು ಇದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಹಾಗೂ ಅದಕ್ಕಾಗಿ ಶಾಸಕರು ಹಾಗೂ ಸರಕಾರವನ್ನು ಅಭಿನಂದಿಸುತ್ತೇವೆ ಎಂದರು.

ಅಲ್ಲದೆ ಕಾಜೂರಿನಲ್ಲಿ ಆವರಣಗೋಡೆ ನಿರ್ಮಾಣಕ್ಕೆ ಶಾಸಕರ ಶಿಫಾರಸ್ಸಿನ ಮೇಲರ ರೂ. 30ಲಕ್ಷ ಅನುದಾನ ಮಂಜೂರು ಗೊಳಿಸಿದ್ದು ಇದರ ಕಾಮಗಾರಿಯೂ ನಡೆಯುತ್ತಿದೆ ಇದಲ್ಲದೆ ಕೆಸರು, ಧೂಳು‌ಮಯವಾಗಿರುತ್ತಿದ್ದ ರಸ್ತೆ ಸೇರಿದಂತೆ ಇತರ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಶಾಸಕ ಹರೀಶ್ ಪೂಂಜ ಅವರು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ‌. ತಾಲೂಕಿನಲ್ಲಿ ದುಸ್ಥಿತಿಯಲ್ಲಿರುವ ಮಸೀದಿಗಳ ಪಟ್ಟಿಯನ್ನು ಮಾಡಿದ್ದು ಇದೀಗ ಪಡಂಗಡಿ‌ ಮಸೀದಿಗೆ ರೂ.5 ಲಕ್ಷ ಅನುದಾನ ಬಂದಿದೆ. ಕಾಜೂರಿನ ಅಭಿವೃದ್ಧಿಯ ವಿಚಾರದಲ್ಲಿ ಶಾಸಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು ಕಾಜೂರಿನ ಜನರ ಪರವಾಗಿ ಅವರ ಕೊಡುಗೆಗಳಿಗೆ ಅವರನ್ನು ಅಭಿನಂದಿಸುತ್ತೇವೆ ಎಂದರು.

ಪೂರಕವಾಗಿ ಮಾತನಾಡಿದ ಕಾಜೂರು ದರ್ಗಾದ ಆಡಳಿತ‌ ಮಂಡಳಿ ಸದಸ್ಯ ಬದ್ರುದ್ದೀನ್ ಕಾಜೂರು ಅವರು ಕಳೆದ ಒಂಭತ್ತು ವರ್ಷಗಳಿಂದ ದರ್ಗಾ ಸಮಿತಿ ಅಸ್ತಿತ್ವದಲ್ಲಿರಲಿಲ್ಲ. ಪೂಂಜ ಅವರು‌ ಕಳೆದ ಬಾರಿ ಸಮಿತಿ ಆಗುವಲ್ಲಿ ಶ್ರಮಿಸಿದ್ದಾರೆ.

ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಗುರುವಾಯನಕೆರೆಯ ಸಲೀಂ ಎಂಬವರು ಕಾಜೂರಿಗೆ ಶಾಸಕರು ನೀಡಿದ ಕೊಡುಗೆಯ ಬಗ್ಗೆ ಅತ್ಯಂತ ವ್ಯಂಗವಾದ ರೀತಿಯಲ್ಲಿ ಮಾತನಾಡಿದ್ದು ಇದನ್ನು ನಾವು ಖಂಡಿಸುತ್ತೇವೆ. ಕಾಜೂರಿನ ವಿಚಾರ ನೋಡಿಕೊಳ್ಳಲು ಅಲ್ಲಿ ಆಡಳಿತ ಮಂಡಳಿಯಿದೆ ಕಾಜೂರಿನ ಜನರಿದ್ದಾರೆ ಅದಕ್ಕೆ ಸಲೀಂಅವರ ಎಚ್ಚರಿಕಯೂ ಬೇಡ ಸಲಹೆಯೂ ಬೇಕಾಗಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯವನ್ನು ತಂದುಗೊಂದಲ ಸೃಷ್ಟಿಸಿ ಅಭಿವೃದ್ಧಿಗೆ ತೊಡಕನ್ನುಂಟುಮಾಡುವುದು ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ.

ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ನಮ್ಮ ಬೆಂಬಲ ಸದಾ ಇದ್ದೇ ಇದೆ ಎಂದರು. ಗೋಷ್ಠಿಯಲ್ಲಿ ಅಬ್ದುಲ್ ಅಜೀ಼ಜ್ ಕಾಜೂರು, ಹಂಸ಼ ಕಾಜೂರು, ಮಹಮ್ಮದ್ ಉಜಿರೆ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು