ಬೆಳ್ತಂಗಡಿ : ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಗುರುದೇವ ಮಠದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತದ ಪರ್ವಕಾಲದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ ನೀಡಿದರು.
ಕಾರ್ಕಳ ತಾಲ್ಲೂಕು ಬಿಲ್ಲವ ಸಂಘದ ಪದಾಧಿಕಾರಿಗಳಾದ ಜಯರಾಮ್ ಸಾಲ್ಯಾನ್ ಉದಯ ಕೋಟ್ಯಾನ್ ಇನ್ನಿತರ ಪ್ರಮುಖರು ಮತ್ತು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಸಿದ್ಧಾಪುರದ ಅಧ್ಯಕ್ಷ ವಿ. ಎನ್. ನಾಯ್ಕ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಪಾದುಕಾ ಪೂಜೆ ನೆರವೇರಿಸಿ ಗುರುಗಳ ಆಶೀರ್ವಾದ ಪಡೆದುಕೊಂಡರು.
ಬೆಳಿಗ್ಗೆ ಗುರುದೇವ ಮಠದಲ್ಲಿ ರವಿ ಶಾಂತಿ ಮತ್ತು ಮಹೇಶ್ ಶಾಂತಿ ನೇತೃತ್ವದಲ್ಲಿ ಚಂಡಿಕಾ ಯಾಗ ನಡೆಯಿತು.